ಪ್ರೀತಿಸಲು ಒಲ್ಲೆ ಎಂದ ಗೆಳತಿಯ ಕತ್ತು ಸೀಳಿ ಕೊಲೆಗೈದ!

Public TV
1 Min Read

ಹುಬ್ಬಳ್ಳಿ: ಪ್ರೀತಿಸಲು ಒಲ್ಲೆ ಎಂದು ಹೇಳಿದ್ದ ಗೆಳತಿಯನ್ನು ಕತ್ತು ಸೀಳಿ ಕೊಲೆ ಮಾಡಿದ್ದ ಆರೋಪಿಯನ್ನು ಹುಬ್ಬಳ್ಳಿ ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಮಂಟೂರು ರಸ್ತೆಯ ನಿವಾಸಿ ಸ್ಟೆಲ್ಲಾ ಬಾಲರಾಜ ಮೋತಕುರಿ (23) ಕೊಲೆಯಾವ ಯುವತಿ. ಸಮೀರ್ ಗೆಳತಿಯನ್ನು ಕೊಲೆ ಮಾಡಿದ ಆರೋಪಿ.

ಏನಿದು ಪ್ರಕರಣ?
ತಾಲೂಕಿನ ಕೊಟಗುಣಸಿ ಗ್ರಾಮದ ಜಮೀನಿನಲ್ಲಿ ಫೆ.7 ರಂದು ಯುವತಿಯ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಈ ಕುರಿತು ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಈ ವೇಳೆ ಯುವತಿಯ ಆಪ್ತ ಸ್ನೇಹಿತ ಸಮೀರ್ ಕೊಲೆ ನಡೆದ ದಿನದಿಂದ ನಾಪತ್ತೆ ಆಗಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಅನುಮಾನದ ಮೇಲೆ ತನಿಖೆ ಮುಂದುವರಿಸಿದ ವೇಳೆ ಸಮೀರ್ ಸಿಕ್ಕಿಬಿದ್ದಾನೆ.

ನಡೆದಿದ್ದೇನು?
ಸಮೀರ್ ಹಾಗೂ ಕೊಲೆಯಾದ ಯುವತಿ ಸ್ಟೆಲ್ಲಾ ಇಬ್ಬರು ಕಳೆದ ಮೂರ್ನಾಲ್ಕು ವರ್ಷಗಳಿಂದ ಆಪ್ತ ಸ್ನೇಹಿತರಾಗಿದ್ದರು. ಕೊಲೆಯಾದ ಫೆ.7 ರಂದು ಸಮೀರ್ ಸ್ಟೆಲ್ಲಾರನ್ನು ಬೈಕ್ ಮೇಲೆ ಕೂರಿಸಿಕೊಂಡು ಕೊಟಗುಣಸಿ ಗ್ರಾಮದ ಹೊಲಕ್ಕೆ ಕರೆದುಕೊಂಡು ಹೋಗಿದ್ದ. ಈ ವೇಳೆ ತನ್ನ ಪ್ರೇಮ ನಿವೇದನೆಯನ್ನು ಯುವತಿಯ ಮುಂದಿಟ್ಟಿದ್ದು, ಆದರೆ ಸ್ಟೆಲ್ಲಾ ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಪ್ರೀತಿಯನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಇದರಿಂದ ಇಬ್ಬರ ನಡುವೇ ಮನಸ್ತಾಪ ಉಂಟಾಗಿ ಜಗಳ ಕೂಡ ಆಗಿತ್ತು. ತನ್ನ ಪ್ರೀತಿಯನ್ನ ನಿರಾಕರಿಸಿದ ಕಾರಣದಿಂದ ಆಕ್ರೋಶಗೊಂಡ ಸಮೀರ್ ಚಾಕುವಿನಿಂದ ಆಕೆಯ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದ. ಬಳಿಕ ಸಿಕ್ಕಿ ಹಾಕಿಕೊಳ್ಳುವ ಭಯದಿಂದ ತಲೆಬೋಳಿಸಿ ಕೊಂಡು  ಗುಜರಾತಿಗೆ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *