ಕೆರೆಯಲ್ಲಿ ಯುವಕನ ಶವ ಪತ್ತೆ – ಕೊಲೆ ಶಂಕೆ!

Public TV
1 Min Read

ಹಾಸನ: ಕೆರೆಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಹೊಸಹಳ್ಳಿ ಬಂಡೆ ಬಳಿ ನಡೆದಿದೆ.

ದಿನೇಶ್(28) ಪತ್ತೆಯಾದ ಯುವಕ ಎಂದು ತಿಳಿದು ಬಂದಿದೆ. ಈತನು ಮೂಲತಃ ಆಲೂರು ತಾಲೂಕಿನ ಗೇಕರವಳ್ಳಿಯ ನಿವಾಸಿಯಾಗಿದ್ದಾನೆ. ಸೋಮವಾರ ಆಲೂರು ತಾಲೂಕಿನ ಹೊಸಹಳ್ಳಿ ಬಂಡೆ ಬಳಿಯಿರುವ ಕಲ್ಲುಕ್ವಾರಿಯ ಕೆರೆಯಲ್ಲಿ ದಿನೇಶ್‍ನ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ.

ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈತನ ವಿರುದ್ಧ ಚಿನ್ನ ಬೆಳ್ಳಿ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ದಿನೇಶ್‍ನ ಸಾವು ಆಕಸ್ಮಿಕವೋ ಅಥವಾ ಹಳೆಯ ವೈಷಮ್ಯಕ್ಕೆ ಯಾರಾದರೂ ಕೊಲೆ ಮಾಡಿ ಕೆರೆಯಲ್ಲಿ ಹಾಕಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಆಲೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *