ಯುವ ಪತ್ರಕರ್ತೆ ಅರ್ಚನಾ ಗುಂಡ್ಮಿ ಸಾವು

Public TV
1 Min Read

ಉಡುಪಿ: ಯುವ ಪತ್ರಕರ್ತೆ ಅರ್ಚನಾ ಗುಂಡ್ಮಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಎಚ್1ಎನ್1 ನಿಂದ ಅರ್ಚನಾ ಮೃತಪಟ್ಟಿದ್ದಾರೆ. ಮೃತ ಅರ್ಚನಾ ಹದಿನೆಂಟು ದಿನಗಳ ಹಿಂದೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅರ್ಚನಾ ಮೂರುವರೆ ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದು ಬಂದಿದೆ. ಆದರೆ ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ಅರ್ಚನಾ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ.

 

ಅರ್ಚನಾ ಬ್ರಹ್ಮಾವರ ತಾಲೂಕು ಸಸ್ತಾನ ಗ್ರಾಮದ ನಿವಾಸಿಯಾಗಿದ್ದು, ಆರಂಭದಲ್ಲಿಯೇ ಎಚ್1ಎನ್1 ಎಂದು ಆಸ್ಪತ್ರೆ ಖಚಿತಪಡಿಸಲಿಲ್ಲ. ಹೀಗಾಗಿ ತಡವಾಗಿ ರೋಗ ಪತ್ತೆ ಮಾಡಿ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಲಾಗಿದೆ. ಗರ್ಭಿಣಿಯಾಗಿದ್ದಾಗ ಎಚ್1 ಎನ್1 ಬಂದರೆ ಅಪಾಯ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಘಟನೆ ಉಡುಪಿಯ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *