ಯುವತಿಯ ಮಾತು ಕೇಳಿ ತನಿಖೆಗಿಳಿದ ಪೊಲೀಸರಿಗೆ ಶಾಕ್!

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿ ಪೊಲೀಸರಿಗೆ ವಿಚಿತ್ರ ಪ್ರಕರಣ ಎದುರಾಗಿದೆ. ಬೆಂಗಳೂರಿನ ಗಿರಿನಗರ ಪೊಲೀಸರಿಗೆ 2017ರಲ್ಲಿ ಸುಶ್ಮಿತ ಅನ್ನೋ ಯುವತಿ ಠಾಣೆಗೆ ಬಂದು ಅದೊಂದು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಶಾಕ್ ಮೇಲೆ ಶಾಕ್ ಸಿಕ್ಕಿದೆ

ನಾನು ಖಾಸಗಿ ಕಂಪನಿಯಲ್ಲಿ ಹೆಚ್ ಆರ್ ಆಗಿ ಕೆಲಸ ಮಾಡುತ್ತಿದ್ದೇನೆ. ಆದರೆ ನನ್ನನ್ನ ಪ್ರತಿದಿನ ಯಾರೋ ಹಿಂಬಾಲಿಸ್ತಾರೆ, ಬೇರೆ ಬೇರೆ ಫೋನ್ ನಂಬರ್ ನಿಂದ ಕಾಲ್ ಮಾಡಿ ಕೊಲೆ ಬೆದರಿಕೆ ಹಾಕುತ್ತಾರೆ. ನಾನು ಮನೆಯಲ್ಲಿರುವ ವೇಳೆ ಖಾಸಗಿ ವಿಡಿಯೋಗಳನ್ನೂ ನನ್ನ ಮತ್ತು ಮನೆಯ ಸದಸ್ಯರಿಗೆ ಕಳುಹಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸಿಲ್ಕ್ ಬೋರ್ಡ್ ಬಳಿ ನನ್ನ ಕಿಡ್ನ್ಯಾಪ್ ಮಾಡಿ ಕೈಕಾಲು ಕಟ್ಟಿ ಹೊಸಕೋಟೆಯ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾದರು ಎಂದು ಸುಶ್ಮಿತಾ ದೂರಿನಲ್ಲಿ ಉಲ್ಲೇಖಿಸಿದ್ದರು.

ಯುವತಿಯ ದೂರು ಆಧರಿಸಿ ಸೀರಿಯಸ್ ಆಗಿ ತನಿಖೆಗೆ ಇಳಿದ ಪೊಲೀಸರಿಗೆ ಯುವತಿಯ ಮೇಲೆಯೇ ಡೌಟ್ ಬಂದಿತ್ತು. ಯುವತಿ ಕೆಲಸ ಮಾಡುವ ಖಾಸಗಿ ಕಂಪನಿಯಲ್ಲಿ ಸ್ನೇಹಿತ ಅಂತಾ ಪರಿಚಯ ಅನಂದ್ ಎಂಬವರನ್ನು ವಿಚಾರಿಸಿದ ಪೋಲೀಸರು ಶಾಕ್ ಆಗಿದ್ದರು. ದೂರುದಾರೆ ಸುಶ್ಮಿತ ತನ್ನ ಕುಟುಂಬದವರನ್ನು ಹೆದರಿಸಲು, ತನ್ನ ಮೊಬೈಲ್, ಸೇರಿದಂತೆ ಕುಟುಂಬಸ್ಥರು ಎಲ್ಲಾ ನಂಬರ್ ಗಳಿಗೂ, ಬೆದರಿಕೆ ಮಸೇಜ್ ಗಳು, ಮನೆಯಲ್ಲೇ ಕ್ಯಾಮರಾ ಇಟ್ಟು ಶೂಟ್ ಮಾಡಿದ ವಿಡಿಯೋಗಳನ್ನು ಹಾಕುತ್ತಿದ್ದಳು. ಇದಕ್ಕೆ ಅಂತಾನೇ ಸುಮಾರು ಹದಿನೈದು ಸಿಮ್ ಕಾರ್ಡ್ ಗಳನ್ನು ಖರೀದಿ ಮಾಡಿ ಆ ಸಿಮ್ ಗಳಿಂದ ಈ ರೀತಿ ತನ್ನಷ್ಟಕ್ಕೆ ತಾನೇ ಸೀನ್ ಕ್ರಿಯೆಟ್ ಮಾಡಿಕೊಳ್ಳುತ್ತಿದ್ದಾಳೆ ಎಂದು ಆನಂದ್ ರಹಸ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ.

ಸದ್ಯ ಯುವತಿಯ ಈ ಹೈಡ್ರಾಮ ನೋಡಿದ ಪೊಲೀಸರಿಗೆ ಆಕೆಯ ನಡುವಳಿಕೆಯಿಂದ ಬೆಚ್ಚಿಬಿದ್ದಿದ್ದಾರೆ. ಇನ್ನೂ ಯುವತಿಯ ಕುಟುಂಬಸ್ಥರು ಕೂಡ ಶಾಕ್ ಆಗಿದ್ದು ಈ ಎಲ್ಲಾ ನಾಟಕೀಯ ಬೆಳವಣಿಗೆ ಕಾರಣ ಏನೂ ಅನ್ನೋದರ ಬಗ್ಗೆ ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *