ತಂಡ ಗೆಲ್ಲಿಸಿದ ಖುಷಿಗೆ ಹಾರ್ಟ್ ಆಟ್ಯಾಕ್: ಮೈದಾನದಲ್ಲೇ ಸಾವನ್ನಪ್ಪಿದ ಯುವ ಕ್ರಿಕೆಟಿಗ

Public TV
1 Min Read

ವಿಜಯಪುರ: ಕ್ರಿಕೆಟ್ ಮ್ಯಾಚ್ ಗೆದ್ದ ಖುಷಿಯಲ್ಲಿ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಧಾರುಣ ಘಟನೆ ನಗರದ ಹರಣಶಿಕಾರಿ ಕಾಲೋನಿಯಲ್ಲಿ ನಡೆದಿದೆ.

 

 

25 ವರ್ಷದ ರಾಹುಲ್ ಚವ್ಹಾಣ್ ಮೃತ ಯುವಕ. ನಗರದಲ್ಲಿ ದುರ್ಗಾದೇವಿ ಜಾತ್ರೆ ಅಂಗವಾಗಿ ಕ್ರಿಕೆಟ್ ಪಂದ್ಯಾಟ ಹಮ್ಮಿಕೊಳ್ಳಲಾಗಿತ್ತು. ಟೂರ್ನಿಯಲ್ಲಿ ಭಾಗವಹಿಸಿದ್ದ ರಾಹುಲ್ ಹ್ಯಾಟ್ರಿಕ್ ಮೂರು ವಿಕೆಟ್ ಪಡೆದುಕೊಂಡಿದ್ದರು. ಆಟದ ಕೊನೆಗೆ ರನ್ ಔಟ್ ಮಾಡುವ ಮೂಲಕ ರಾಹುಲ್ ಪಂದ್ಯವನ್ನು ಗೆಲ್ಲಿಸಿದ್ದರು.

 

ಇದೇ ಖುಷಿಯಲ್ಲಿದ್ದ ರಾಹುಲ್ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರಾಹುಲ್ ಗೆ ಕ್ರಿಕೆಟ್ ಆಡಲು ತೆರಳದಂತೆ ಪೋಷಕರು ಹೇಳಿದ್ದರು. ಆದರೆ ಪೋಷಕರ ಮಾತು ಕೇಳದ ರಾಹುಲ್ ತಂಡವನ್ನು ಗೆಲ್ಲಿಸಿ ಅಂಗಳದಲ್ಲೇ ಮೃತಪಟ್ಟಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *