ದಿಗಂತ್‌ಗೆ ಆಗಿರೋದು ಸಣ್ಣ ಗಾಯ, ಗಾಬರಿಪಡುವ ಅಗತ್ಯವಿಲ್ಲ: ಯೋಗರಾಜ್ ಭಟ್

Public TV
1 Min Read

ಸ್ಯಾಂಡಲ್‌ವುಡ್ ನಟ ದಿಗಂತ್ ಮಂಚಾಲೆ ಸ್ಪೈನಲ್‌ ಮೈನರ್ ಇಂಜುರಿ ಆಗಿದೆ. ಈ ಹಿನ್ನಲೆ ನಟ ದಿಗಂತ್ ಅವರನ್ನು ನೋಡಲು ಬೆಂಗಳೂರಿನ ಆಸ್ಪತ್ರೆಗೆ ನಿರ್ದೇಶಕ ಯೋಗರಾಜ್ ಭಟ್ ಧಾವಿಸಿದ್ದಾರೆ. ಬಳಿಕ ದಿಗಂತ್ ಆರೋಗ್ಯದ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ದಿಗಂತ್ ತಮ್ಮ ಕುಟುಂಬ ಸಮೇತ ಗೋವಾ ಪ್ರವಾಸದಲ್ಲಿದ್ದರು. ಅಂತೆಯೇ ಬೀಚ್‌ನಲ್ಲಿ ಸ್ಟಂಟ್ ಮಾಡಲು ಹೋಗಿ ಕುತ್ತಿಗೆಗೆ ಏಟು ಮಾಡಿಕೊಂಡಿದ್ದಾರೆ. ಕೂಡಲೇ ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿರುವ ನಟನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ ಲಿಫ್ಟ್ ಮೂಲಕ ಕರೆತಂದು ಸದ್ಯ ನಟನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ದಿಗಂತ್ ಮತ್ತು ಅವರ ಕುಟುಂಬದ ಭೇಟಿಯ ಬಳಿಕ ಮಾಧ್ಯಮದ ಜತೆ ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿದ್ದಾರೆ. ಇದನ್ನೂ ಓದಿ: ಸ್ಪೈನಲ್‍ಗೆ ಮೈನರ್ ಇಂಜುರಿ ಆಗಿದ್ದು, ಆಪರೇಷನ್ ಆಗ್ಬೇಕಿದೆ: ದಿಗಂತ್ ಮಾವ

ದಿಗಂತ್ ಮತ್ತು ಐಂದ್ರಿತಾ ತಂದೆ ಜೊತೆ ಮಾತನಾಡಿದೆ. ಅವರಿಗೆ ಯಾವುದೇ ತೊಂದರೆಯಿಲ್ಲ. ಕುತ್ತಿಗೆ ಏಟು ಮಾಡಿಕೊಂಡಿದ್ದಾನೆ. ಕಾಂಪ್ಲಿಕೇಷನ್ ಏನೂ ಇಲ್ಲ. ಗಾಬರಿ ಪಡುವ ಅವಶ್ಯಕತೆ ಇಲ್ಲ, ಇನ್ನು ಎರಡು, ಮೂರು ಗಂಟೆಯಲ್ಲಿ ದಿಗಂತ್‌ಗೆ ಆಪರೇಷನ್ ಆಗಲಿದೆ.
ದೊಡ್ಡ ಆಘಾತಕಾರಿ ವಿಚಾರ ಏನೂ ಇಲ್ಲ. ಮಾನಸಿಕವಾಗಿ, ದೈಹಿಕವಾಗಿ ಸೈಕ್ಲಿಂಗ್ ಮಾಡಿ ಸದೃಡವಾಗಿದ್ದಾನೆ. ದಿಗಂತ್‌ಗೆ ಆಗಿರೋದು ಸಣ್ಣ ಗಾಯ ಅಷ್ಟೇ ಎಂದು ದಿಗಂತ್ ಆರೋಗ್ಯದ ಕುರಿತು ಯೋಗರಾಜ್ ಭಟ್ ಸ್ಪಷ್ಟನೆ ನೀಡಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *