8 ಸಾವಿರ ಕೋಟಿಯಲ್ಲಿ ಪ್ರಾರಂಭವಾದ ಎತ್ತಿನಹೊಳೆ ಯೋಜನೆ ಈಗ 23 ಸಾವಿರ ಕೋಟಿ ತಲುಪಿದೆ: ಹೆಚ್.ಡಿ.ಕೆ

Public TV
2 Min Read

ನೆಲಮಂಗಲ: 8 ಸಾವಿರ ಕೋಟಿಯಲ್ಲಿ ಪ್ರಾರಂಭವಾದ ಎತ್ತಿನಹೊಳೆ ಯೋಜನೆ ಈಗ 23 ಸಾವಿರ ಕೋಟಿ ತಲುಪಿದೆ ಮುಂದೆ 50 ಸಾವಿರ ಕೋಟಿ ಆದರು ಆಶ್ಚರ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ನೆಲಮಂಗಲ ತಾಲೂಕು ಕೆಂಗಲ್ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಹಾಗೂ ಶ್ರೀ ಕೃಷ್ಣ ರುಕ್ಮಿಣಿ ಅಮ್ಮನವರ ದೇವಾಲಯದ ಜೀರ್ಣೊದ್ದರ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವರು, ಬಯಲು ಸೀಮೆಗೆ ಕುಡಿಯುವ ನೀರು ಸರಬರಾಜು ಮಾಡುವ ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡಿದ ಅವರು, 3 ವರ್ಷದಲ್ಲಿ ಪೂರ್ಣವಾಗ ಬೇಕಿದ್ದ ಯೋಜನೆ 12 ವರ್ಷ ಆದರು ಪೂರ್ಣವಾಗಿಲ್ಲ ಎಂದು ಬೇಸರವನ್ನ ವ್ಯಕ್ತಪಡಿಸಿದ್ದಾರೆ. 8 ಸಾವಿರ ಕೋಟಿಯಲ್ಲಿ ಪ್ರಾರಂಭವಾದ ಎತ್ತಿನಹೊಳೆ ಯೋಜನೆ ಈಗ 23 ಸಾವಿರ ಕೋಟಿ ತಲುಪಿದೆ, ಮುಂದೆ 50 ಸಾವಿರ ಕೋಟಿ ಆದರು ಆಶ್ಚರ್ಯವಿಲ್ಲ ಎಂದರು. ಇದನ್ನೂ ಓದಿ: ಬಳ್ಳಾರಿಗೆ ಗೌಪ್ಯವಾಗಿ ಎಂಟ್ರಿ ಕೊಟ್ರು ಜನಾರ್ದನ ರೆಡ್ಡಿ – ಕುಟುಂಬಸ್ಥರ ಜೊತೆ ವರಮಹಾಲಕ್ಷ್ಮಿ ಹಬ್ಬ ಆಚರಣೆ

ಎತ್ತಿನಹೊಳೆ ಯೋಜನೆ ಪ್ರಾರಂಭವಾಗಿದ್ದು 8 ಸಾವಿರ ಕೋಟಿಯಲ್ಲಿ. ಮೊದಲಿಗೆ ದೇವರಾಯನದುರ್ಗದಲ್ಲಿ 10 ಟಿಎಂಸಿ ಸಾಮಾಥ್ರ್ಯದ ಜಲಾಶಯ ನಿರ್ಮಾಣದ ಬಗ್ಗೆ ಹೇಳಿದರು, ದೇವರಾಯನದುರ್ಗದಲ್ಲಿ ಜಲಾಶಯ ನಿರ್ಮಾಣ ಕಷ್ಟ ಸಾಧ್ಯವೆಂದು ಕೊರಟಗೆರೆ ಬಳಿಯ ಬೈರಗೊಂಡ್ಲು ಬಳಿ 5 ಟಿಎಂಸಿ ಸಾಮಾಥ್ರ್ಯದ ಜಲಾಶಯವನ್ನ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಇದನ್ನೂ ಓದಿ: 5 ವರ್ಷ ಸ್ವತಂತ್ರ ಸರ್ಕಾರ ಬಂದ್ರೆ ದೇಶ ನೋಡುವಂತ ಕ್ರಾಂತಿಕಾರಿ ಬದಲಾವಣೆ ಆಗುತ್ತೆ: ಎಚ್.ಡಿ.

ಈಗ 2 ಟಿಎಂಸಿ ಜಲಾಶಯಕ್ಕೆ ಇಳಿಸಿಕೊಂಡಿದ್ದಾರೆ. ಜಲಾಶಯದ ಬಳಿ ಯಾವುದೇ ಕಾಮಾಗಾರಿ ನಡೆಯದಿದ್ದರೂ ಮುಖ್ಯಮಂತ್ರಿ ಬದಲಾಗುವ ಹಿಂದಿನ ದಿನ 1500 ಕೋಟಿಗಳ ಮತ್ತೊಂದು ಯೋಜನೆಗೆ ಅಂಕಿತ ಹಾಕಲಾಗಿದೆ. ನಾನು ಮೊದಲೇ ಹೇಳಿದಂತೆ ಎತ್ತಿನಹೊಳೆ ಯೋಜನೆ ರಾಜಕಾರಣಿಗಳ ಮತ್ತು ಅಧಿಕಾರಿಗಳ ಹಣ ಲೂಟಿ ಮಾಡುವ ಯೋಜನೆಯಾಗಿದೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ತರುವುದ್ದಾಗಿ ಹೇಳಿ ಜನಗಳಿಗೆ ಟೋಪಿ ಹಾಕಿ ಹಣವನ್ನ ಲೂಟಿ ಮಾಡಲಾಗುತ್ತಿದೆ. 3 ವರ್ಷದಲ್ಲಿ ಪೂರ್ಣಗೊಳಿಸುವುದ್ದಾಗಿ ಹೇಳಿದರು 12 ವರ್ಷವಾದರು ಕಾಮಾಗಾರಿ ಪೂರ್ಣಗೊಳಿಸುವ ಕೆಲಸ ಮಾಡಿಲ್ಲ, 8 ಸಾವಿರದಿಂದ 23 ಸಾವಿರ ಕೋಟಿಗೆ ಹೋಗಿರುವ ಯೋಜನೆ ಮುಂದೆ 50 ಸಾವಿರ ಕೋಟಿಗೂ ಹೋದರು ಆಶ್ಚರ್ಯ ವಿಲ್ಲ ಎಂದು ಯೋಜನೆಯ ಬಗ್ಗೆ ಬೇಸರವನ್ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *