ನಿನ್ನೆ ವಿಜ್ಞಾನಿಗಳು ಕೆಲ್ಸ ಮಾಡಿದ್ರು, ಇಂದು ಐಟಿ ಅಧಿಕಾರಿಗಳು ಕೆಲ್ಸ ಮಾಡಿದ್ದಾರೆ: ಸುರೇಶ್ ಕುಮಾರ್ ಟಾಂಗ್

Public TV
1 Min Read

ಬೆಂಗಳೂರು: ಇಂದು ಜೆಡಿಎಸ್ ನಾಯಕರು ಮತ್ತು ಅವರ ಆಪ್ತ ಉದ್ಯಮಿಗಳ ಮನೆ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ, ಅವರೇ ಈ ಐಟಿ ದಾಳಿ ನಡೆಸಿದ್ದಾರೆ ಎಂದು ಪ್ರತಿಪಕ್ಷ ನಾಯಕರು ಆರೋಪಿಸುತ್ತಿದ್ದು, ಈ ಬಗ್ಗೆ ಬಿಜೆಪಿ ನಾಯಕ ಸುರೇಶ್ ಕುಮಾರ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

“ನಿನ್ನೆ ವಿಜ್ಞಾನಿಗಳು ಅವರ ಕೆಲಸ ಅವರು ಮಾಡಿದರು. ಇಂದು ಐಟಿ ಅಧಿಕಾರಿಗಳು ಅವರ ಕೆಲಸವನ್ನು ಮಾಡಿದ್ದಾರೆ. ಮೊದಲನೆದು ನಿಜವಾದರೇ ಎರಡನೆಯದೂ ಅಷ್ಟೇ ನಿಜ” ಎಂದು ಬರೆದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ಐಟಿ ದಾಳಿ – ಮೋದಿ ವಿರುದ್ಧ ಸಿಎಂ ಕೆಂಡಾಮಂಡಲ

ಬುಧವಾರ ಮೋದಿ ಅವರು ಮಿಶನ್ ಶಕ್ತಿ ಕುರಿತು ಭಾಷಣ ಮಾಡಿ ಮಾಹಿತಿ ತಿಳಿಸಿದಾಗ, ವಿಪಕ್ಷ ನಾಯಕರು ಇದು ವಿಜ್ಞಾನಿಗಳ ಕೆಲಸ ಇದಕ್ಕೆ ಮೋದಿ ಯಾಕೆ ಪ್ರಶಂಸೆ ಪಡೆಯುತ್ತಿದ್ದಾರೆ ಎಂದು ಟೀಕಿಸಿದ್ದರು. ಇದನ್ನೂ ಓದಿ:‘ಲೋಕಸಭೆ ಚುನಾವಣೆ ಮುಂದೂಡಲು ಐಟಿ ದಾಳಿ’

ಸಿಎಂ ಕುಮಾರಸ್ವಾಮಿ, 50 ವರ್ಷಗಳ ಹಿಂದೆ ಚಾಲನೆ ಸಿಕ್ಕಿದ್ದನ್ನು ಇವತ್ತು ಮೋದಿ ಉದ್ಘಾಟನೆ ಮಾಡಿದ್ದಾರೆ. ಅದನ್ನ ತಾವೇ ಮಾಡಿರುವ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇದು ಮಹತ್ವ ಕೊಡುವಂತದ್ದೆನಲ್ಲ. ನರೇಂದ್ರ ಮೋದಿ ಮಾಡಿರೋದು ಎಂದು ಬಿಂಬಿಸೋದು ಸರಿಯಲ್ಲ. ಇದು ದೊಡ್ಡ ಸಾಧನೆಯೂ ಅಲ್ಲ. ಇದನ್ನ ಬಳಸಿಕೊಂಡು ಮೋದಿ ವೋಟ್ ಪಡೆಯುತ್ತಿದ್ದಾರೆ. ಯಾರೇ ಪ್ರಧಾನಿ ಆಗಿದ್ದರೂ ವಿಜ್ಞಾನಿಗಳು ಅವರ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇಲ್ಲಿ ಮೋದಿ ಯಾವುದೇ ಸಾಧನೆ ಮಾಡಿಲ್ಲ. ಸುಮ್ಮನೆ ಮೋದಿಗೆ ಪ್ರಚಾರ ನೀಡುತ್ತಿದ್ದೀರಿ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *