ಹಾಲಿನ ಅಭಿಷೇಕದ ಬದಲು, ಬಡ ಮಕ್ಕಳಿಗೆ ಹಾಲು ನೀಡಿ ಯಶ್ ಹುಟ್ಟುಹಬ್ಬ ಆಚರಣೆ

Public TV
1 Min Read

ಚಿಕ್ಕೋಡಿ/ಬೆಳಗಾವಿ: ನಟ ಯಶ್ ಹುಟ್ಟುಹಬ್ಬವನ್ನು ರಾಜ್ಯದೆಲ್ಲೆಡೆ ಸಂಭ್ರದಿಂದ ಆಚರಿಸಲಾಗುತ್ತಿದೆ. ಅಭಿಮಾನಿಗಳು ವಿವಿಧ ರೀತಿಯಲ್ಲಿ ಯಶ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅದೇ ರೀತಿ ಈ ಅಭಿಮಾನಿಗಳು ಕಟೌಟಿಗೆ ಹಾಲು ಎರೆದು ಆಚರಿಸದೆ, ಮಕ್ಕಳಿಗೆ ಹಾಲು ಹಂಚಿ ಸಂಭ್ರಮಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಮದಲ್ಲಿ ವಿಶೇಷವಾಗಿ ನಟ ಯಶ್ ಹುಟ್ಟುಹಬ್ಬ ಆಚರಿಸಲಾಯಿತು. ಅಭಿಮಾನಿಗಳು 20 ಅಡಿ ಕಟೌಟ್ ನಿರ್ಮಿಸಿದ್ದರೂ ಅದಕ್ಕೆ ಹಾಲಿನ ಅಭಿಷೇಕ ಮಾಡದೇ ಅದೇ ಹಾಲನ್ನು ಬಡ ಮಕ್ಕಳಿಗೆ ನೀಡಿ ಸಂಭ್ರಮಿಸಿದರು.

ಅಲ್ಲದೆ ಅಭಿಮಾನಿಗಳು ಕೆಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರದಿಂದ ಹುಟ್ಟುಹಬ್ಬ ಆಚರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಯಶ್ ಅಭಿಮಾನಿಗಳಾದ ಹಿರಾಶುಗರಸ್, ಶಿವ ನಾಯಕ್, ರಾಮಪ್ಪ ಚೌಗಲಾ, ಮಂಜುನಾಥ ಮತ್ತಿವಾಡ, ಅಭಿನಂದನ್ ಗೋಣಿ, ದುಂಡಪ್ಪಾ ಮಗದುಮ್ಮ ಸೇರಿದಂತೆ ಇತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *