ಮೈಸೂರು ರಾಜಕುಟುಂಬಕ್ಕೆ ಶೀಘ್ರವೇ ಸಂತಾನ ಭಾಗ್ಯ – ತ್ರಿಷಿಕಾ ಇದೀಗ ಗರ್ಭವತಿ

Public TV
1 Min Read

ಮೈಸೂರು: ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ಗರ್ಭಾವತಿಯಾಗಿದ್ದು, ರಾಜವಂಶಸ್ಥರಲ್ಲಿ ಸಂತಸ ಮೂಡಿಸಿದೆ.

ತ್ರಿಷಿಕಾ ಇದೀಗ 4 ತಿಂಗಳ ಗರ್ಭಿಣಿಯಾಗಿದ್ದು ದಸರೆ ವೇಳೆಗೆ ಮಗು ಜನನವಾಗೋ ನಿರೀಕ್ಷೆಯಿದೆ. ಸೂತಕದ ಹಿನ್ನೆಲೆಯಲ್ಲಿ ಈ ಬಾರಿ ದಸರಾ ನಡೆಯುತ್ತಾ? ನಡೆಯಲ್ವಾ? ಎಂಬ ಪ್ರಶ್ನೆ ಕೂಡ ಮೂಡಿತ್ತು. ಆದ್ರೆ ರಾಜ ಕುಟುಂಬಕ್ಕೆ ಸೂತಕ ಅನ್ವಯಿಸದ ಕಾರಣ ಈ ಬಾರಿ ಎಂದಿನಂತೆ ದಸರಾ ನಡೆಯಲಿದೆ ಎಂದು ಅರಮನೆ ಜ್ಯೋತಿಷಿಗಳು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಶ್ರೀರಂಗಪಟ್ಟಣದ ರಾಜ ಶ್ರೀರಂಗರಾಯನ ಪತ್ನಿ ಅಲಮೇಲಮ್ಮ ಶಾಪದಿಂದಾಗಿ ಒಡೆಯರ್ ವಂಶದ ರಾಜರಿಗೆ ಮಕ್ಕಳಾಗುವುದಿಲ್ಲ ಎಂದು ಜಾನಪದ ಕಥೆಯಲ್ಲಿ ಹೇಳಲಾಗುತ್ತದೆ. ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂದು ಅಲಮೇಲಮ್ಮ ಶಾಪ ನೀಡಿದ್ದರು ಎಂಬ ನಂಬಿಕೆಯಿದೆ. ಇದೀಗ ತ್ರಿಷಿಕಾ ಗರ್ಭಿಣಿಯಾಗಿದ್ದು ಮಕ್ಕಳ ಭಾಗ್ಯ ಪಡೆಯಂತಾಗಿದೆ.

ಯದುವೀರ್ ಅವರು ರಾಣಿ ಪ್ರಮೋದಾದೇವಿ ಒಡೆಯರ್ ಅವರ ದತ್ತು ಪುತ್ರ.

Share This Article
Leave a Comment

Leave a Reply

Your email address will not be published. Required fields are marked *