ಡಿಕೆಶಿಯನ್ನ ಸಂಕಷ್ಟದಿಂದ ಪಾರು ಮಾಡುವಂತೆ ದೇವಿಗೆ ಪೂಜೆ

Public TV
1 Min Read

ಯಾದಗಿರಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಸಂಕಷ್ಟದಿಂದ ಪಾರು ಮಾಡಲು ಜಿಲ್ಲೆಯ ದೇವಸ್ಥಾನವೊಂದರಲ್ಲಿ ಅಮವಾಸ್ಯೆಯ ತಡ ರಾತ್ರಿವರೆಗೂ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ.

ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಶ್ರೀದುರ್ಗಾ ದೇವಿ ದೇವಸ್ಥಾನದಲ್ಲಿ ಡಿ.ಕೆ.ಶಿವಕುಮಾರ್ ಅವರಿಗಾಗಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಈ ವೇಳೆ ಮಾಜಿ ಸಚಿವರು ಆದಷ್ಟು ಬೇಗ ಸಮಸ್ಯೆಗಳಿಂದ ಪಾರಾಗಲಿ ಎಂದು ದೇವರಿಗೆ ಬೇಡಿಕೊಳ್ಳಲಾಗಿದೆ.

ಡಿ.ಕೆ.ಶಿವಕುಮಾರ್ ಅವರು ಕಷ್ಟದ ಸಮಯದಲ್ಲಿ ಗೋನಾಲ ಗ್ರಾಮದ ಶ್ರೀದುರ್ಗಾ ದೇವಿಯ ಆರಾಧನೆ ಮಾಡಿ ತಮ್ಮ ಸಂಕಷ್ಟವನ್ನು ದೂರ ಮಾಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಕಳೆದ ಫೆಬ್ರವರಿ ತಿಂಗಳಲ್ಲಿ ಈ ದೇವರ ದರ್ಶನಕ್ಕೆ ಬರುವುದಾಗಿ ಮಾತು ಕೊಟ್ಟು, ಕೊನೆಗಳಿಯಲ್ಲಿ ಮಾತು ತಪ್ಪಿದ್ದರು. ಹೀಗಾಗಿ ಮಾಜಿ ಸಚಿವರಿಗೆ ದೇವಿ ಶಾಪ ನೀಡಿದ್ದಾಳೆ ಅಂತ ದೇವಸ್ಥಾನದ ಪೂಜಾರಿ ಮಹಾದೇವಪ್ಪ ಮನವರಿಕೆ ಮಾಡಿಕೊಟ್ಟಿದ್ದಾರೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಸದ್ಯ ಇ.ಡಿ ಸಂಕಷ್ಟದಿಂದ ಪಾರು ಮಾಡು ಎಂದು ಮತ್ತೆ ಗೋನಾಲ ದುರ್ಗಾದೇವಿ ಮೊರೆ ಹೋಗಿದ್ದಾರೆ. ದೆಹಲಿಯ ಜಾನಿ ನಿರ್ದೇಶನಾಲಯದ ಕಚೇರಿಯಲ್ಲಿ ತನಿಖೆಗೆ ಒಳಗಾಗುವಷ್ಟು ದಿನ ವಿಶೇಷ ಪೂಜೆ ಸಲ್ಲಿಸುವಂತೆ ದೇವಸ್ಥಾನ ಪೂಜಾರಿಯ ಬಳಿ ಬೇಡಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಶುಕ್ರವಾರ ಗೋನಾಲದ ದುರ್ಗಾದೇವಿ ಅಮವಾಸ್ಯೆ ತಡ ರಾತ್ರಿ ವಿಶೇಷ ಪೂಜೆಯನ್ನು ನೇರವೆರಿಸಿರುವ ಅರ್ಚಕರು ಡಿಕೆಶಿಯನ್ನು ಸಂಕಷ್ಟದಿಂದ ಪಾರು ಮಾಡುವಂತೆ ದುರ್ಗಾದೇವಿಗೆ ಮೊರೆಯನ್ನಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *