ಹೆಣ್ಣು ಮಕ್ಕಳು ಅಶ್ಲೀಲ ಬಟ್ಟೆ ಹಾಕೋದ್ರಿಂದ ರೇಪ್ ಆಗ್ತಿದೆ: ಬಸವಪ್ರಕಾಶ ಸ್ವಾಮೀಜಿ

Public TV
1 Min Read

ಧಾರವಾಡ: ಹೆಣ್ಣು ಮಕ್ಕಳು ಅಶ್ಲೀಲ ಬಟ್ಟೆ ಧರಿಸಿದರೆ ಮನಸ್ಸು ಪ್ರಚೋದನೆಗೆ ಒಳಗಾಗಿ ಅತ್ಯಾಚಾರ ನಡೆಯುತ್ತಿವೆ ಎಂದು ಅಕ್ಕಮಹಾದೇವಿ ಅನುಭವ ಪೀಠದ ಬಸವಪ್ರಕಾಶ ಸ್ವಾಮೀಜಿಗಳು ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ.

ಧಾರವಾಡದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಯುವತಿಯರು ಅಶ್ಲೀಲ ಬಟ್ಟೆಗಳನ್ನ ಹಾಕಿಕೊಂಡು ಓಡಾಡಬಾರದು. ಹೆಣ್ಣು ಮಕ್ಕಳು ಅಶ್ಲೀಲ ಬಟ್ಟೆ ಧರಿಸಿದರೆ ಮನಸ್ಸು ಪ್ರಚೋದನೆಗೆ ಒಳಗಾಗಿ ಅತ್ಯಾಚಾರ ನಡೆಯುತ್ತವೆ ಎಂದು ಹೇಳಿದರು. ಅಲ್ಲದೇ ಹೆಣ್ಣು ಮಕ್ಕಳು ನಮ್ಮ ಸಂಸ್ಕೃತಿ ಪಾಲನೆ ಮಾಡಬೇಕು ಎಂದು ಹೇಳಿದ ಅವರು, ಈ ಹಿಂದೆ ಮಾತೇ ಮಹಾದೇವಿಯವರ ಹೇಳಿಕೆಯನ್ನ ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ ಎಂದರು.

ರಾತ್ರಿ 12 ಗಂಟೆಯ ನಂತರ ಮಹಿಳೆಯರು ಓಡಾಡಬಾರದು. ಇದರಿಂದ ಅವರ ಪ್ರಾಣಕ್ಕೆ ಕುತ್ತು ಬರುತ್ತದೆ. ಮೈತುಂಬ ಬಟ್ಟೆ ಧರಿಸಿ ಭಾರತೀಯ ಸಂಸ್ಕೃತಿಯ ತಳಹದಿಯ ಮೇಲೆ ಹೊರಟರೆ ಸಮಾಜ ಒಳ್ಳೆಯ ದಾರಿಯಲ್ಲಿ ನಡೆಯುತ್ತದೆ ಎನ್ನುವ ಉದ್ದೇಶದಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದು ತಿಳಿಸಿದರು.

ಇದೇ ವೇಳೆ ರಾಯಚೂರಿನ ವಿದ್ಯಾರ್ಥಿನಿ ಸಾವಿಗೆ ವಿಷಾದ ವ್ಯಕ್ತ ಪಡಿಸಿದ ಅವರು, ಈ ಸಾವಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ತಪ್ಪಿತ್ತಸ್ಥರನ್ನ ಸಾರ್ವಜನಿಕವಾಗಿ ಗಲ್ಲಿಗೆ ಏರಿಸಬೇಕು ಎಂದು ಹೇಳಿದರು. ಸರ್ಕಾರ ಕ್ರಮ ಕೈಗೊಳ್ಳದೇ ಇದ್ದಲ್ಲಿ ಬೆಳಗಾವಿ ಸುವರ್ಣಸೌಧದ ಬಳಿ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದರು.

https://www.youtube.com/watch?v=lrTiKsfdWK0

Share This Article
Leave a Comment

Leave a Reply

Your email address will not be published. Required fields are marked *