ಹಾಲಿನ ಡೈರಿಯಿಂದ ಮೋಸ- ಸಚಿವ ರೇವಣ್ಣ ಸ್ಥಳಕ್ಕೆ ಬರುವಂತೆ ಆಗ್ರಹಿಸಿ ರೈತ ಮಹಿಳೆಯರಿಂದ ಪ್ರತಿಭಟನೆ

Public TV
1 Min Read

 

ಹಾಸನ: ಹಾಲಿನ ಹಣ ಸಂದಾಯ ಮಾಡದ ಕಾರಣ ಗ್ರಾಮದ ಡೈರಿ ಕಾರ್ಯದರ್ಶಿ ವಿರುದ್ಧ ಹಾಸನ ತಾಲೂಕಿನ ಎಜಿ ಕೊಪ್ಪಲದ ಬಂಡಿಹಳ್ಳಿ ರೈತರು ಪ್ರತಿಭಟನೆ ಕೈಗೊಂಡಿದ್ದಾರೆ.

ಹಾಲಿನೊಂದಿಗೆ ಡೈರಿ ಮುಂದೆ ಧರಣಿ ಕುಳಿತ ರೈತ ಮಹಿಳೆಯರು, 18 ವರ್ಷಗಳಿಂದಲೂ ಡೈರಿಗೆ ಹಾಲು ಹಾಕುತ್ತಿದ್ದೇವೆ. ಆದ್ರೆ ಇದ್ರಿಂದ ನಮಗೆ ಒಂದು ರೂಪಾಯಿಯೂ ಲಾಭವಿಲ್ಲ. ಎರಡು ತಿಂಗಳಿಂದ ಹಾಲಿನ ಹಣ ಸಂದಾಯ ಮಾಡದೆ ಬಾಕಿ ಇದೆ. ಅಷ್ಟೇ ಅಲ್ಲದೇ ಹಾಲು ಅಳೆಯಲು ಕಂಪ್ಯೂಟರ್ ವ್ಯವಸ್ಥೆಗಳಿದ್ದು, ಅದರಿಂದ ಅಳತೆ ಮಾಡದೇ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಡೈರಿಯ ಬಳಿ ಸೆಕ್ರೆಟರಿ ಮತ್ತು ಹಾಲು ಅಳತೆ ಮಾಡುವವರು ಯಾರೂ ಬಂದಿಲ್ಲ. ಹಾಗೇ ಒಂದು ಚೀಲ ಬೂಸ ಕೊಟ್ರೆ, ಎರಡು ಚೀಲ ಬೂಸ ಎಂದು ಬರೆದುಕೊಳುತ್ತಾರೆ. ಹೀಗೆ ಮಾಡಿದರೆ ನಾವು ಏನು ಮಾಡೋದು ಎಂದು ಡೈರಿ ಕಾರ್ಯದರ್ಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಸ್ಥಳಕ್ಕೆ ಸಚಿವ ರೇವಣ್ಣ ಬಂದು ಸಮಸ್ಯೆ ಬಗೆಹರಿಸಬೇಕೆಂದು ಮಹಿಳೆಯರು ಆಗ್ರಹಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *