ಶೀಲ ಶಂಕಿಸಿದ ಗಂಡನನ್ನೇ ಕೊಂದಳು ಪತ್ನಿ!

Public TV
1 Min Read

-ಮಗನನ್ನ ಹತ್ಯೆ ಮಾಡಿದ್ರೂ ಸೊಸೆ ಮೇಲೆ ಅತ್ತೆ ಪ್ರೀತಿ

ಬೆಂಗಳೂರು: ಗಂಡನ ಕಿರುಕುಳ ತಾಳಲಾರದೇ ಹೆಂಡತಿಯೇ ಗಂಡನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಯಶವಂತಪುರದ ಸುಬೇದಾರ್‍ಪಾಳ್ಯದಲ್ಲಿ ನಡೆದಿದೆ.

36 ವರ್ಷದ ಸತೀಶ್ ಮೃತ ದುರ್ದೈವಿ. ಮೂಲತಃ ತುಮಕೂರಿನವನಾದ ಸತೀಶ್ ಬೆಂಗಳೂರಲ್ಲಿ ಸೆಕ್ಯುರಿಟಿ ಸೂಪರ್‍ವೈಸರ್ ಆಗಿ ಕೆಲಸ ಮಾಡ್ತಿದ್ದ. ಕಲ್ಪನಾ ಅನ್ನೋರ ಜೊತೆ ಮದುವೆಯಾಗಿ ಎರಡು ಮಕ್ಕಳೂ ಕೂಡ ಇವೆ. ಆದ್ರೆ ಪ್ರತಿ ದಿನ ಕುಡಿದು ಬರ್ತಿದ್ದ ಸತೀಶ್ ಹೆಂಡತಿಯ ಶೀಲದ ಮೇಲೆ ಅನುಮಾನ ಪಡುತ್ತಿದ್ದ.

ಇದರಿಂದ ಬೇಸತ್ತ ಕಲ್ಪನಾ ಬುಧವಾರ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಆದರೆ ಸತೀಶ್ ಕುಟುಂಬದವರು ಮಾತ್ರ ಕಲ್ಪನಾ ಮೇಲೆ ಯಾವುದೇ ಆರೋಪ ಮಾಡ್ತಿಲ್ಲ. ಪ್ರಕರಣ ದಾಖಲಿಸಿಕೊಂಡಿರೋ ಯಶವಂತಪುರ ಪೊಲೀಸ್ರು ಕಲ್ಪಾನರನ್ನ ವಶಕ್ಕೆ ಪಡೆದು ತನಿಖೆ ನಡೆಸ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *