ಶಕ್ತಿದೇವತೆ ಸನ್ನಿಧಿಯಲ್ಲಿ ಭಕ್ತರ ಚಿನ್ನ ಕದ್ದು ಸಿಕ್ಕಿಬಿದ್ದ ಕಳ್ಳಿಯರು!

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶಕ್ತಿದೇವತೆ ಬಂಡೆಮಹಾಂಕಾಳಿ ದೇವಸ್ಥಾನದಲ್ಲಿ ನಾಲ್ವರು ಕಳ್ಳಿಯರ ಗುಂಪು ಭಕ್ತರ ಚಿನ್ನ ಕದ್ದು ಸಿಕ್ಕಿಬಿದ್ದಿದ್ದಾರೆ.

ಮಹಾಲಯ ಅಮಾವಾಸ್ಯೆಯಂದು ದೇವಸ್ಥಾನಕ್ಕೆ ಬಂದಿದ್ದ ವೃಧ ಭಕ್ತೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕತ್ತರಿಸಿ ಓಡಿಹೋಗಲು ಯತ್ನಿಸಿದ್ದಾರೆ. ಆದರೆ ಕಳ್ಳಿಯರ ಕೃತ್ಯ ಗಮನಿಸಿದ ವ್ಯಕ್ತಿಯೊಬ್ಬರು ಸಮಯ ಪ್ರಜ್ಞೆ ಮೆರೆದ್ರು. ತಕ್ಷಣವೇ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಭಕ್ತರ ಸಹಾಯದಲ್ಲಿ ನಾಲ್ವರು ಕಳ್ಳಿಯರನ್ನ ಹಿಡಿದು ಕೆಂಪೇಗೌಡರ ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಕಳ್ಳಿಯರು ಆಟೋದಲ್ಲಿ ದೇವಸ್ಥಾನಕ್ಕೆ ಬರುವುದು, ಗರ್ಭಗುಡಿ ಬಳಿ ಸರ ಕದಿಯಲು ಹೊಂಚು ಹಾಕಿರುವುದು, ಇವರ ಕೃತ್ಯವನ್ನು ವ್ಯಕ್ತಿಯೊಬ್ಬರು ನೋಡಿದ ತಕ್ಷಣ ಓಡಿಹೋಗಲು ಯತ್ನಿಸಿ ಸಿಕ್ಕಿಬೀಳುವ ದೃಶ್ಯಗಳೆಲ್ಲವೂ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮಕ್ಕಳ ಮಾರಾಟ ಗ್ಯಾಂಗ್- 11 ಕಂದಮ್ಮಗಳು ಸೇಲ್

Share This Article
Leave a Comment

Leave a Reply

Your email address will not be published. Required fields are marked *