ಪತಿ ಕಣ್ಣೆದುರೇ ಪತ್ನಿಯ ಅರೆನಗ್ನಗೊಳಿಸಿ, ನಾಲಿಗೆ, ಖಾಸಗಿ ಅಂಗ ಕತ್ತರಿಸಿ ಕರುಳನ್ನೇ ಹೊರತೆಗೆದ್ರು!

Public TV
2 Min Read

ರಾಂಚಿ: ವಾಮಾಚಾರಕ್ಕೆ ಮಹಿಳೆಯೊಬ್ಬರನ್ನು ಆಕೆಯ ಅಕ್ಕ ಹಾಗೂ ಬಾವನೇ ವಿಚಿತ್ರವಾಗಿ ಬಲಿಕೊಟ್ಟ ಭೀಕರ ಕೃತ್ಯವೊಂದು ಜಾರ್ಖಂಡ್‍ನಲ್ಲಿ ನಡೆದಿದೆ.

ಮಹಿಳೆಯನ್ನು ಗುಡಿಯಾ ದೇವಿ(26) ಎಂದು ಗುರುತಿಸಲಾಗಿದೆ. ಈ ಘಟನೆ ಜಾರ್ಖಂಡ್‍ನ ಗರ್ವಾ ಜಿಲ್ಲೆಯಲ್ಲಿ ಜೂನ್ 21 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ.

ವಾಮಾಚಾರಕ್ಕೆ ಸಹೋದರಿಯನ್ನೇ ಬಲಿಕೊಟ್ಟಳು: ಗುಡಿಯಾಳ ಅಕ್ಕ ಹಾಗೂ ಬಾವ ತಂತ್ರ ಸಿದ್ಧಿಗಾಗಿ ಪೂಜೆ ಪುನಸ್ಕಾರವನ್ನು ಆಯೋಜಿಸಿದ್ದರು. ಈ ವೇಳೆ ತಂತ್ರ ವಿದ್ಯೆಗೆ ಮಹಿಳೆಯನ್ನು ಬಲಿಕೊಡಬೇಕು ಎಂದು ಮಂತ್ರವಾದಿ ಹೇಳಿದ್ದಾನೆ. ಹೀಗಾಗಿ ಗುಡಿಯಾ ದೇವಿಯನ್ನು ವಾಮಾಚಾರಕ್ಕೆ ಬಲಿ ಕೊಡಲು ಆಕೆಯ ಅಕ್ಕ ಹಾಗೂ ಬಾವ ನಿರ್ಧರಿಸಿದ್ದಾರೆ. ಅದರಂತೆ ಆಕೆಯನ್ನು ಮಂತ್ರವಾದಿಯ ಬಳಿ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮಂತ್ರವಾದಿ ಗುಡಿಯಾಳಿಗೆ ಕೋಲಿನಿಂದ ಚೆನ್ನಾಗಿ ಥಳಿಸಿದ್ದಾನೆ. ಪರಿಣಾಮ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.

ಈ ವೇಳೆ ಮೂವರು ಸೇರಿ ಗುಡಿಯಾಳನ್ನು ಅರೆನಗ್ನಗೊಳಿಸಿ ಮೊದಲು ನಾಲಿಗೆಯನ್ನು ಕತ್ತರಿಸಿದ್ದಾರೆ. ನಂತರ ಗುಡಿಯಾ ಖಾಸಗಿ ಅಂಗವನ್ನು ಕತ್ತರಿಸಿ ಕೈ ಹಾಕಿ ಕರುಳು ಕಿತ್ತು ಹೊರತೆಗೆದಿದ್ದಾರೆ. ಈ ಮೂಲಕ ವಾಮಾಚಾರ ಮಾಡಿದ್ದಾರೆ. ಭೀಕರ ಕೃತ್ಯದಿಂದ ಗುಡಿಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.  ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ಮನೆಯವರು – ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ

ಇಷ್ಟೆಲ್ಲಾ ಆದ ಬಳಿಕ ಆರೋಪಿಗಳು ಗುಡಿಯಾ ಶವವನ್ನು ತೆಗೆದುಕೊಂಡು ಹೋಗಿ ಕಾಡಿನಲ್ಲಿ ಸುಟ್ಟು ಹಾಕಿ ಪರಾರಿಯಾಗಿದ್ದಾರೆ. ಈ ಕೃತ ಭಾರೀ ಸುದ್ದಿಯಾಗುತ್ತಿದ್ದಂತೆಯೇ ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಇದೀಗ ಕೃತ್ಯ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಯುವತಿಯ ಸಹೋದರಿ ಮತ್ತು ಸೋದರ ಮಾವ ಸೇರಿದಂತೆ ಎಲ್ಲರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮೃತಳ ಪತಿ ಮುನ್ನಾ ಕಣ್ಣೆದುರೇ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ತನ್ನ ಮತ್ತು ಮಕ್ಕಳ ಪ್ರಾಣ ಉಳಿಸಿಕೊಳ್ಳಲು ಇದೆಲ್ಲವನ್ನೂ ನೋಡುತ್ತಲೇ ಇದ್ದೆ. ಎಲ್ಲರೂ ನನ್ನ ಕಣ್ಣ ಮುಂದೆಯೇ ಆಕೆಯನ್ನು ಸುಟ್ಟು ಹಾಕಿದರು ಎಂದು ಪತ್ನಿಯನ್ನು ನೆನಪಿಸಿಕೊಂಡು ಅಕ್ಕಪಕ್ಕದ ಮನೆಯವರ ಮುಂದೆ ಅಲಳಲು ತೋಡಿಕೊಂಡಿದ್ದಾನೆ. ಈ ವಿಚಾರವನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ ನಂತರ ಕೃತ್ಯ ಬಯಲಾಗಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *