ಟ್ಯಾಂಕರ್‍ಗೆ ಡಿಕ್ಕಿಯಾಗಿ ಮೃತಪಟ್ಟ ಮಹಿಳೆ-ಶಾಲಾ ಬಸ್ ಹರಿದು ಜೀವಬಿಟ್ಟ ಹಸುಳೆ

Public TV
1 Min Read

ಬೆಂಗಳೂರು: ಬೈಕ್ ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಓಡಿಸುತ್ತಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ನಗರದ ಚನ್ನಸಂದ್ರ ಬಳಿಯ ನಾಗೊಂಡಹಳ್ಳಿ ನಡೆದಿದೆ.

37 ವರ್ಷದ ಕವಿತಾ ಮೃತ ದುರ್ದೈವಿ. ಅತಿವೇಗವಾಗಿ ಬಂದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಕವಿತಾರ ತಲೆಗೆ ತೀವ್ರವಾದ ಪೆಟ್ಟಾಗಿದ್ದು, ಕವಿತಾರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ರು, ಚಿಕಿತ್ಸೆ ಫಲಿಸಿದೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ಯಾಂಕರ್ ಚಾಲಕನನ್ನ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.

ಬಸ್ ಮತ್ತು ಟ್ಯಾಂಕರ್ ಚಾಲಕ

ಆಟವಾಡುತ್ತಾ ಇದ್ದಕಿಂದಂತೆ ಬಸ್‍ನತ್ತ ಓಡಿ ಬಂದ ನತದೃಷ್ಟ ಕ್ರಿಸ್ಟೀನಾ ಜೇಸ್ ಎಂಬ ಮಗು ಅಪಘಾತದಿಂದ ಗಂಭೀರ ಗಾಯಗೊಂಡಿತ್ತು. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದೆ.

ಘಟನೆ ಬಳಿಕ ಬಸ್ ಚಾಲಕ ವಿರೂಪಾಕ್ಷನಿಗೆ ಸಾರ್ವಜನಿಕರು ಥಳಿಸಿದ್ದು, ಚಾಲಕನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *