ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾದ ಮಹಿಳೆ – ವಾರ್ಡಿಗೆ ಮಾಂತ್ರಿಕನನ್ನು ಕರೆತಂದ ಪತಿ

Public TV
1 Min Read

ಭೋಪಾಲ್: ಹಾವು ಕಚ್ಚಿದೆ ಎಂದು ಆಸ್ಪತ್ರೆಗೆ ಮಹಿಳೆಯೊಬ್ಬರು ದಾಖಲಾಗಿದ್ದು, ಆಕೆಯ ಪತಿ ವಾರ್ಡಿನಲ್ಲೇ ಮಾಂತ್ರಿಕನಿಂದ ಚಿಕಿತ್ಸೆ ಕೊಡಿಸಿದ ಘಟನೆ ಭಾನುವಾರ ಮಧ್ಯಪ್ರದೇಶದ ದಾಮೋದಲ್ಲಿ ನಡೆದಿದೆ.

ಇರ್ಮತಿ ದೇವಿ(25) ಆಸ್ಪತ್ರೆಗೆ ದಾಖಲಾದ ಮಹಿಳೆ. ಇರ್ಮತಿ ದೇವಿ ದಾಮೋ ಜಿಲ್ಲೆಯ ಬಟಿಯಾಗರ್ ನಿವಾಸಿಯಾಗಿದ್ದು, ಹಾವು ಕಚ್ಚಿದ್ದಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮಹಿಳೆ ಆಸ್ಪತ್ರೆಗೆ ದಾಖಲಾದ ದಿನವೇ ಅದೇ ರಾತ್ರಿ ಪತಿ ಹಾಗೂ ಆಕೆಯ ಸಂಬಂಧಿಕರು ವಾರ್ಡಿಗೆ ಮಾಂತ್ರಿಕನನ್ನು ಕರೆ ತಂದಿದ್ದಾರೆ.

ವಾರ್ಡಿನಲ್ಲಿ ಮಾಂತ್ರಿಕ ಇರುವುದನ್ನು ನರ್ಸ್ ಗಮನಿಸಿದರೂ ಸಹ ಆಕೆ ಅವರನ್ನು ತಡೆಯಲಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೆ ಮಾಂತ್ರಿಕ ವಾರ್ಡಿಗೆ ಬಂದು ಪೂಜೆ ಮಾಡಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ವಿಡಿಯೋ ನೋಡಿ ಆಸ್ಪತ್ರೆ ಸಿಬ್ಬಂದಿ ದಂಗಾಗಿದ್ದಾರೆ.

ಸೆಕ್ಯೂರಿಟಿ ಗಾರ್ಡ್ ಹಾಗೂ ವೈದ್ಯರು ಡ್ಯೂಟಿಯಲ್ಲಿದ್ದ ಕಾರಣ ಅವರಿಗೆ ಈ ಘಟನೆ ಬಗ್ಗೆ ಗೊತ್ತಾಗಲಿಲ್ಲ. ನರ್ಸ್ ಒಬ್ಬರು ಮಾಂತ್ರಿಕನನ್ನು ಇದನ್ನು ನೋಡಿದ್ದಾರೆ. ಆದರೆ ಅವರನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

ಮಾಂತ್ರಿಕ ವಾರ್ಡಿನಲ್ಲಿ ಪೂಜೆ ಮಾಡುತ್ತಿರುವುದನ್ನು ಸೆಕ್ಯೂರಿಟಿ ಆಗಲಿ ವೈದ್ಯರಾಗಲಿ ಗಮನಿಸಲಿಲ್ಲ. ಆದರೆ ನರ್ಸ್ ಮಾಂತ್ರಿಕನನ್ನು ನೋಡಿ ಸೆಕ್ಯೂರಿಟಿಗೆ ಹಾಗೂ ವೈದ್ಯರಿಗೆ ವಿಷಯ ತಿಳಿಸದ ಕಾರಣ ಅವರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಸಿವಿಲ್ ಸರ್ಜನ್ ಮಮತಾ ತಿಮೋರಿ ಹೇಳಿದ್ದಾರೆ.

ಈ ಘಟನೆ ನಡೆಯುವಾಗ ವೈದ್ಯರು ಬೇರೆ ವಾರ್ಡಿನಲ್ಲಿ ರೋಗಿಯ ಆರೋಗ್ಯವನ್ನು ಪರಿಶೀಲಿಸುತ್ತಿದ್ದರು. ಆಸ್ಪತ್ರೆಯಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದರೂ ಸಹ ಯಾವುದೇ ಸೆಕ್ಯೂರಿಟಿ ಗಾರ್ಡ್ ಈ ಬಗ್ಗೆ ಗಮನ ಹರಿಸಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *