ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಕೊಲ್ಲಲು ಸುಪಾರಿ ಕೊಟ್ಟ ಪತ್ನಿ

Public TV
1 Min Read

ಚೆನ್ನೈ : ಮಹಿಳೆ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲ್ಲಲು ಯತ್ನಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ನಾಗವಲ್ಲಿ ಅಲಿಯಾಸ್ ಯಾಸ್ಮಿನ್ ಬಾನು (25) ಆರೋಪಿ. ಯಾಸ್ಮಿನ್ ಬಾನು ತನ್ನ ಪತಿ ಅಕ್ಬರ್ ಬಚ್ಚಾರನ್ನು ಕೊಲ್ಲಲು ಇಬ್ಬರು ರೌಡಿಗಳಿಗೆ ಸುಪಾರಿ ಕೊಟ್ಟಿದ್ದಳು.

ಅಕ್ಬರ್ ಚೈನಾ ಬಜಾರ್‌ನಲ್ಲಿರುವ ತಮ್ಮ ಮೊಬೈಲ್ ರಿಪೇರಿ ಅಂಗಡಿಯನ್ನು ಮುಚ್ಚಿ ಮನೆಗೆ ಹೋಗುತ್ತಿದ್ದಾಗ ಗೂಂಡಾಗಳು ದಾಳಿ ಮಾಡಿದ್ದಾರೆ. ಆದರೂ ತಪ್ಪಿಸಿಕೊಂಡ ಅಕ್ಬರ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಸ್ಥಳೀಯ ಪೊಲೀಸರು, ಹೆಚ್ಚಿನ ತನಿಖೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ಅಕ್ಬರ್ ಪತ್ನಿಗೆ ಅನೈತಿಕ ಸಂಬಂಧವಿರುವುದು ತಿಳಿದು ಬಂದಿದೆ.

ಯುಸ್ಮಿನ್ ಬಾನು ಕಳೆದ 10 ವರ್ಷಗಳ ಹಿಂದೆ ಅಕ್ಬರ್ ಅವರನ್ನು ಮದುವೆ ಆಗಿದ್ದರು. ಮಹಿಳೆಯು ಚೀನಾ ಬಜಾರ್‌ನ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಸೂಲ್ ಮೊಹಮ್ಮದ್ (32) ಎಂಬಾತನೊAದಿಗೆ ಸಂಬಂಧ ಹೊಂದಿರುವ ವಿಷಯ ತಿಳಿದು ಬಂದಿದೆ. ಇದನ್ನೂ ಓದಿ: ಸೆರಮ್ ಸಂಸ್ಥೆಯ 2ನೇ ಲಸಿಕೆ ಕೋವೊವ್ಯಾಕ್ಸ್‌ ತುರ್ತು ಬಳಕೆಗೆ ಶಿಫಾರಸು

POLICE JEEP

ಅಕ್ಬರ್, ಯುಸ್ಮಿನ್ ಬಾನು ಹತ್ತಿರದ ರಸುಲ್ ಅವರ ಜೊತೆಗಿನ ಸಂಬಂಧವನ್ನು ಬಿಡಲು ಹೇಳಿದ್ದರು. ಇದನ್ನು ಒಪ್ಪದ ಯುಸ್ಮಿನ್ ಬಾನು, ಅಕ್ಬರ್ ಅವರ ಕೊಲೆಗೆ ಸಂಚನ್ನು ರೂಪಿಸಿರುವ ವಿಷಯ ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಮದ್ಯ ಸೇವಿಸಬೇಕು ಅನ್ನೋರು ಬಿಹಾರಕ್ಕೆ ಬರಲೇಬೇಡಿ: ನಿತೀಶ್ ಕುಮಾರ್

ಈ ಸಂಬಂಧ ಅಕ್ಬರ್ ಪತ್ನಿ ಹಾಗೂ ಅವಳ ಸಹಚರರ ವಿರುದ್ಧ ದೂರು ಸಲ್ಲಿಕೆಯಾಗಿದೆ. ಕೊಲೆಗೆ ಯತ್ನಿಸಿರುವ ಆರೋಪದ ಮೇರೆಗೆ ಯುಸ್ಮಿನ್ ಬಾನುಳನ್ನು ಪೊಲೀಸರು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *