ವರದಕ್ಷಿಣೆಗಾಗಿ ಪತ್ನಿ, ಮಗುವನ್ನು ಮನೆಯಿಂದ ಹೊರ ಹಾಕಿದ ಪತಿರಾಯ

Public TV
1 Min Read

ಕಾರವಾರ: ಪತಿಯೊಬ್ಬ ವರದಕ್ಷಿಣೆಗಾಗಿ ತನ್ನ ಪತ್ನಿ ಮತ್ತು ಮಗುವನ್ನು ಮನೆಯಿಂದ ಹೊರ ಹಾಕಿರುವ ಘಟನೆ ಕಾರವಾರ ತಾಲೂಕಿನ ದಾಂಡೇಲಿಯಲ್ಲಿ ನಡೆದಿದೆ.

ಮೂಳಕ ಮಂಥನ್ ಎಂಬಾತನೇ ಪತ್ನಿ ಮತ್ತು ಮಗುವನ್ನು ಮನೆಯಿಂದ ಹೊರಹಾಕಿದ ಪತಿ. ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮದ ಸವಿತಾ ರನ್ನು ಪೇಪರ್ ಮಿಲ್‍ನಲ್ಲಿ ಎಂಜಿಯರ್ ಅಂತಾ ಹೇಳಿ ಮದುವೆಯಾಗಿದ್ದಾನೆ. ಮದುವೆಯಾದ ನಂತರ ಮಂಥನ್ ಪೇಪರ್ ಮಿಲ್ ನಲ್ಲಿ ಸೂಪರ್‍ವೈಸರ್ ಆಗಿ ಕೆಲಸ ಮಾಡಿಕೊಂಡಿರವುದು ಗೊತ್ತಾಗಿದೆ.

ಪತಿಯ ಮುಖವಾಡ ಗೊತ್ತಾದರೂ ಸವಿತಾ ಗಂಡನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು. ಆದರೆ ಪಾಪಿ ಪತಿ ಮಂಥನ್, ವರದಕ್ಷಿಣೆಗಾಗಿ ಪತ್ನಿಗೆ ಇನ್ನಿಲ್ಲದ ಕಿರುಕುಳ ನೀಡಿ ಮಗು ಸಮೇತ ಪತ್ನಿಯನ್ನು ಮನೆಯಿಂದ್ಲೇ ಹೊರಹಾಕಿದ್ದಾನೆ.

ಸದ್ಯ ಸವಿತಾ ದಾಂಡೇಲಿ ನಗರ ಠಾಣೆಯಲ್ಲಿ ಪತಿ ಮಂಥನ್ ಹಾಗೂ ಅತ್ತೆಯ ಮೇಲೆ ವರದಕ್ಷಿಣಿ ಕಿರುಕುಳದ ದೂರು ದಾಖಲಿಸಿದ್ದಾರೆ. ಇತ್ತ ದೂರು ದಾಖಲಾಗುತ್ತಿದ್ದಂತೆ ಮಂಥನ್ ಊರಿನಿಂದ ನಾಪತ್ತೆಯಾಗಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *