ಎಚ್1ಎನ್1ಗೆ ಬೆಳ್ತಂಗಡಿಯ ಬಾಣಂತಿ ಬಲಿ- ಅನಾಥವಾಯ್ತು 25 ದಿನದ ಕಂದಮ್ಮ

Public TV
1 Min Read

ಮಂಗಳೂರು: ಮಾಹಾ ಮಾರಿ ಎಚ್1ಎನ್1 ಖಾಯಿಲೆಗೆ ಬಾಣಂತಿ ಮಹಿಳೆ ಬಲಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವೇಣೂರು ನಿವಾಸಿ 27 ವರ್ಷದ ಪುಷ್ಪಾವತಿ ಕಳೆದ ಒಂದು ತಿಂಗಳಿನಿಂದ ಎಚ್1ಎನ್1 ಖಾಯಿಲೆಗೆ ತುತ್ತಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

8 ತಿಂಗಳ ಗರ್ಭಿಣಿಯಾಗಿದ್ದ ಪುಷ್ಪಾವತಿ ಹೊಟ್ಟೆಯಲ್ಲಿದ್ದ ಮಗುವನ್ನು ಸಿಸೇರಿಯನ್ ಮೂಲಕ ಹೊರ ತೆಗೆಯಲಾಗಿತ್ತು. ಆದ್ರೆ ತೀವ್ರ ಅನಾರೋಗ್ಯಕ್ಕೀಡಾಗಿ ಪುಷ್ಪಾವತಿ ಮೃತರಾಗಿದ್ದಾರೆ. ಹೀಗಾಗಿ 25 ದಿನದ ಪುಟ್ಟ ಕಂದಮ್ಮ ಅನಾಥವಾಗಿದೆ. ಸದ್ಯ ಮಗು ಆರೋಗ್ಯವಾಗಿದ್ದು ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಶುಶ್ರೂಷೆಯಲ್ಲಿದೆ.

ವೇಣೂರು ಗ್ರಾಮ ಪಂಚಾಯತ್ ನಲ್ಲಿ ಡಾಟಾ ಎಡಿಟರ್ ಆಗಿದ್ದ ಪುಷ್ಪಾವತಿ ಗೆ ಎಚ್1ಎನ್1 ಉಲ್ಬಣವಾಗಿ, ಶ್ವಾಸಕೋಶದಲ್ಲಿ ಸಮಸ್ಯೆಯೂ ಕಂಡುಬಂದಿತ್ತು. ಕಡು ಬಡತನದ ನಡುವೆಯೂ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ರೂ ಪುಷ್ಪಾವತಿ ಮೃತಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *