ಸರ್ಕಾರಿ ಸೌಲಭ್ಯ ಕೇಳಿದ್ರೆ ಲಂಚ ಕೇಳ್ತಾರೆ, ಇಲ್ಲಂದ್ರೆ ಮಂಚಕ್ಕೆ ಕರೀತಾರೆ – ಸಿಎಂ ಎಚ್‍ಡಿಕೆ ಕಾರ್ಯಕ್ರಮದಲ್ಲಿ ಮಹಿಳೆ ಅಳಲು

Public TV
1 Min Read

ಚಿಕ್ಕಬಳ್ಳಾಪುರ: ಸರ್ಕಾರಿ ಸೌಲಭ್ಯ ಕೇಳಿಕೊಂಡು ಹೋದರೆ ಲಂಚ ಕೇಳುತ್ತಾರೆ ಇಲ್ಲ ಅಂದರೆ ಮಂಚಕ್ಕೆ ಕರೀತಾರೆ ಎಂದು ಸಿಎಂ ಕುಮಾರಸ್ವಾಮಿ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಸಿಎಂ ಮುಂದೆ ಅಳಲು ತೋಡಿಕೊಂಡಿದ್ದಾರೆ.

ರೈತರ ಸಾಲಮನ್ನಾ ಯೋಜನೆಯ ಋಣಮುಕ್ತ ಪತ್ರ ವಿತರಿಸಲು ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಮಹಿಳೆ ಸಿಎಂ ಬಳಿ ತಮ್ಮ ಅಳಲು ತೋಡಿಕೊಳ್ಳಲು ಪ್ರಯತ್ನಿಸಿದರು. ಸಿಎಂ ಅವರಿಗೆ ತಮ್ಮ ಮನವಿ ತಿಳಿಸಲು ತೆರಳಿದ್ದ ವೇಳೆ ಮಧ್ಯ ಪ್ರವೇಶಿದ ಪೊಲೀಸರು ಮಹಿಳೆಯನ್ನು ಕಾರ್ಯಕ್ರಮ ಸ್ಥಳದಿಂದ ಹೊರ ಕರೆತಂದರು.

ದೊಡ್ಡಬಳ್ಳಾಪುರ ನಗರ ಶಾಂತಿ ನಗರದ ನಿವಾಸಿಯಾದ ಛಾಯಾ ಅವರು ಸಿಎಂ ಬಳಿ ತಮ್ಮ ಸಮಸ್ಯೆ ಮುಂದಿಟ್ಟು ಸಹಾಯ ಕೇಳಲು ಪ್ರಯತ್ನಿಸಿದ್ರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಹಿಳೆ, ನನ್ನ ಪತಿ ಅಪಘಾತವೊಂದರಲ್ಲಿ ಕೈ ಮುರಿದುಕೊಂಡು ಅಂಗವಿಕಲರಾಗಿದ್ದರು. ಈ ವೇಳೆ ಕುಟುಂಬವನ್ನು ನಿರ್ವಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡರು. ನನಗೆ ಇಬ್ಬರು ಮಕ್ಕಳಿದ್ದು, ಅವರಿಗೆ ಶಿಕ್ಷಣ ಕೊಡಿಸಲು ಕೂಡ ನನಗೆ ಕಷ್ಟವಾಗಿದೆ ಎಂದರು.

ಸ್ವಾಭಿಮಾನದಿಂದ ಬದಲು ಬಯಸಿ ಸರ್ಕಾರದ ಯೋಜನೆಗಳ ಸಹಾಯ ಪಡೆಯಲು ತೆರಳಿದರೆ ಲಂಚ ಕೇಳುತ್ತಾರೆ. ಹಣ ಇಲ್ಲ ಎಂದರೆ ನೀನೇ ಬಾ ಎಂದು ಕರೆಯುತ್ತಾರೆ ಎಂದು ಎಂದು ಹೇಳಿ ಕಣ್ಣೀರಿಟ್ಟರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *