ಚಿರತೆ ದತ್ತು ಪಡೆದು ಪ್ರಾಣಿ ಪ್ರೀತಿ ಮೆರೆದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

Public TV
1 Min Read

ಮೈಸೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಆಲ್‍ರೌಂಡರ್ ಆಟಗಾರ್ತಿ ಕೆ.ವೇದಾ ಕೃಷ್ಣಮೂರ್ತಿ ಅವರು ಮೈಸೂರು ಜಯಚಾಮರಾಜೇಂದ್ರ ಮೃಗಾಲಯದ ಚಿರತೆಯನ್ನು ದತ್ತು ಪಡೆದಿದ್ದಾರೆ.

ಇದನ್ನೂ ಓದಿ: ಬಹಿರಂಗವಾಗಿ ಪತ್ನಿ ಮೇಲೆ ಪ್ರೀತಿ ತೋರಿಸಿದ ಸಿಎಂ!

ಮೈಸೂರು ಮೃಗಾಲಯದ ಪ್ರಾಣಿಯನ್ನ ದತ್ತು ಯೋಜನೆ ಅಡಿಯಲ್ಲಿ ‘ಭಾವನಾ’ ಎಂಬ ಹೆಸರಿನ ಹೆಣ್ಣು ಚಿರತೆಯನ್ನು ಕೆ.ವೇದಾ ಕೃಷ್ಣಮೂರ್ತಿ ಅವರು ದತ್ತು ಪಡೆದಿದ್ದಾರೆ. ಈ ಚಿರತೆಯ ನಿರ್ವಹಣೆಗಾಗಿ ವರ್ಷಕ್ಕೆ 35 ಸಾವಿರ ರೂ. ಹಣವನ್ನು ವೇದಾ ನೀಡಲಿದ್ದಾರೆ. ಮೃಗಾಲಯದ ನಿರ್ದೇಶಕರು ದತ್ತು ಪತ್ರವನ್ನು ವೇದಾ ಕೃಷ್ಣಮೂರ್ತಿ ಅವರಿಗೆ ಹಸ್ತಾಂತರಿಸಿದ್ದಾರೆ.

ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಂದು ಆನೆ ಹಾಗೂ ಒಂದು ಚಿರತೆಯನ್ನು ದತ್ತು ಪಡೆದಿದ್ದರು.

ಇದನ್ನೂ ಓದಿ: ಪ್ರಾಣಿಗಳನ್ನು ದತ್ತು ಸ್ವೀಕರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Share This Article
Leave a Comment

Leave a Reply

Your email address will not be published. Required fields are marked *