ರಾಡ್‍ಗೆ ಕಟ್ಟಿ ಏಕಾಏಕಿ ಪತ್ನಿಗೆ ಬೆಂಕಿ ಹಚ್ಚಿ ಕೊಂದ ಪತಿ

Public TV
1 Min Read

ಭುವನೇಶ್ವರ: ಎರಡನೇ ಮಗುವೂ ಹೆಣ್ಣಾಗಿದ್ದಕ್ಕೆ ಪತಿ, ಅತ್ತೆ-ಮಾವ ಸೇರಿಕೊಂಡು ಸೊಸೆಗೆ ಹಿಂಸೆ ಕೊಟ್ಟು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿರುವ ಘಟನೆ ಒಡಿಶಾದ ಸಂಬಲ್ಪುರ ಜಿಲ್ಲೆಯಲ್ಲಿ ನಡೆದಿದೆ.

ಹಿರಾಕುಡ್ ಪ್ರದೇಶದಲ್ಲಿ ವಿಎಸ್‍ಎಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಜ್ಯೋತಿರ್ಮಯಿ ನಾಯಕ್ (27) ಎಂದು ಗುರುತಿಸಲಾಗಿದೆ. ಜ್ಯೋತಿರ್ಮಯಿಗೆ ಈಗಾಗಲೇ ಒಂದು ಹೆಣ್ಣು ಮಗು ಇತ್ತು. ಇತ್ತೀಚೆಗೆ ಎರಡನೇ ಮಗು ಸಹ ಹೆಣ್ಣಾಗಿದೆ. ಇತ್ತ ಅವರ ಪತಿಯ ಮನೆಯವರಿಗೆ ಗಂಡು ಮಗು ಬೇಕಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗಂಡು ಮಗುವಾಗಿಲ್ಲ ಎಂದು ಪ್ರತಿದಿನ ಪತಿಯ ಮನೆಯವರು ಹಿಂಸೆ ಕೊಡುತ್ತಿದ್ದರು. ಫೆಬ್ರವರಿ 13ರಂದು ಜ್ಯೋತಿರ್ಮಯಿಯ ಪತಿ ಸ್ಮೃತಿ ರಂಜನ್, ಮಾವ ರಘುನಾಥ್ ನಾಯಕ್ ಮತ್ತು ಅತ್ತೆ ಬಸಂತಿ ನಾಯಕ್ ಸೇರಿಕೊಂಡು ತಮ್ಮ ಮನೆಯ ಛಾವಣಿಯ ಮೇಲೆ ಬಲವಂತವಾಗಿ ಕರೆದುಕೊಂಡು ಹೋಗಿ ರಾಡ್‍ಗೆ ಕಟ್ಟಿದ್ದಾರೆ. ಬಳಿಕ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ನೆರೆಹೊರೆಯವರು ಬಂದು ಆಕೆಯನ್ನು ಬುರ್ಲಾದಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಹಿಳೆಯ ದೇಹ 90% ರಷ್ಟು ಸುಟ್ಟು ಹೋಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜ್ಯೋತಿರ್ಮಯಿ ಮೃತಪಟ್ಟಿದ್ದಾರೆ.

ಮೃತ ಜ್ಯೋತಿರ್ಮಯಿಯ ತಂದೆ ಕೃಷ್ಣಾ ಚಂದ್ರ ಸತ್ಪತಿ ಅವರು ಹಿರಾಕುಡ್ ಪೊಲೀಸರಿಗೆ ಈ ಕುರಿತು ದೂರು ಸಲ್ಲಿಸಿದ್ದಾರೆ. ಮೃತ ಮಹಿಳೆಯ ತಂದೆ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆ ಪತಿ ಮತ್ತು ಅತ್ತೆ-ಮಾವನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *