ಬೆಂಗ್ಳೂರಿಗೆ ವಿಂಗ್ ಕಮಾಂಡರ್ ಅಭಿನಂದನ್ ಎಂಟ್ರಿ!

Public TV
1 Min Read

ಬೆಂಗಳೂರು: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸದ್ಯದಲ್ಲಿಯೇ ಬೆಂಗಳೂರಿಗೆ ಎಂಟ್ರಿ ಕೊಡಲಿದ್ದಾರೆ. ಅಲ್ಲದೆ ಫೈಟರ್ ಜೆಟ್ ಕೂಡ ಏರಲಿದ್ದಾರೆ.

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕ್‍ನ ಎಫ್16 ಹೊಡೆದುರುಳಿಸಿದ ಭಾರತ ಮಾತೆಯ ಹೆಮ್ಮೆಯ ಪುತ್ರ. ಆದರೆ ಈ ವೇಳೆ ಗಾಯಗೊಂಡಿದ್ದ ಅಭಿನಂದನ್, ಫೈಟರ್ ಜೆಟ್ ಏರುವುದು ಅನುಮಾನ ಎನ್ನಲಾಗಿತ್ತು. ಅಲ್ಲದೆ ಮಾರ್ಚ್ ನಲ್ಲಿ ಅವರನ್ನು ರಜೆ ಮೇಲೆ ಕಳುಹಿಸಲಾಗಿತ್ತು. ಬಳಿಕ ಬೆಂಗಳೂರಿನಲ್ಲಿ ದೈಹಿಕ ಪರೀಕ್ಷೆ ನಡೆಸಿದ್ದ ವೈದ್ಯರು, ಅಭಿನಂದನ್ ಫಿಟ್ ಆಗಿದ್ದಾರೆ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಇದನ್ನೂ ಓದಿ: ವಿಂಗ್‍ಕಮಾಂಡರ್ ಅಭಿನಂದನ್ ಹೆಸರು ‘ವೀರ ಚಕ್ರ’ ಪ್ರಶಸ್ತಿಗೆ ಶಿಫಾರಸ್ಸು

ಈಗ ಪುನಃ ಈ ತಿಂಗಳಾಂತ್ಯದಲ್ಲಿ ಬೆಂಗಳೂರಿನ ಹೆಚ್‍ಎಎಲ್‍ನಲ್ಲಿರುವ ಇನ್‍ಸ್ಟಿಟ್ಯೂಟ್ ಆಫ್ ಏರೋಸ್ಪೇಸ್‍ಗೆ ಅಭಿನಂದನ್ ಆಗಮಿಸಲಿದ್ದಾರೆ. ಸಾಮಾನ್ಯವಾಗಿ ಫೈಟರ್ ಜೆಟ್‍ನಿಂದ ಎಜೆಕ್ಟ್ ಆದವರನ್ನು 12 ವಾರಗಳ ಕಾಲ ತಪಾಸಣೆ ನಡೆಸಿ, ನಂತರವೇ ಅಧಿಕಾರಿಗಳು ಅಂತಿಮ ನಿರ್ಧಾರ ಕೈಗೊಳ್ತಾರೆ. ಈಗಾಗಲೇ ಅಭಿನಂದನ್ ಆರೋಗ್ಯ ಫೈಟರ್ ಜೆಟ್ ಏರಲು ಫಿಟ್ ಆಗಿದೆ ಎಂದು ವೈದ್ಯರು ಹೇಳಿದ್ದು, ಬೆಂಗಳೂರಿಗೆ ಬಂದು ಪ್ರಮಾಣ ಪತ್ರ ಪಡೆಯಲಿದ್ದಾರೆ.

ಮೇ ತಿಂಗಳ ಅಂತ್ಯದಲ್ಲಿ ಅಭಿನಂದರ್ ಫೈಟರ್ ಜೆಟ್ ಏರಲಿದ್ದು, ಮತ್ತೆ ಭಾರತ ಮಾತೆಯ ಸೇವೆಗೆ ಮರಳಲಿದ್ದಾರೆ. ಭದ್ರತೆ ದೃಷ್ಟಿಯಿಂದ ಅಭಿನಂದನ್‍ರನ್ನು ಬೇರೆ ಕಡೆ ಸೇವೆಗೆ ನಿಯೋಜಿಸಲು ವಾಯುಸೇನೆ ಪ್ಲಾನ್ ಮಾಡಿದೆ. ಅಲ್ಲದೆ ಶೌರ್ಯ ಪ್ರಶಸ್ತಿ ನೀಡುವಂತೆಯೂ ಅಧಿಕಾರಿಗಳು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

https://www.youtube.com/watch?v=ArvRnqPs81s

Share This Article
Leave a Comment

Leave a Reply

Your email address will not be published. Required fields are marked *