2022ರ ಒಳಗಡೆ ಭಯೋತ್ಪಾದನೆ, ನಕ್ಸಲ್ ಚಟುವಟಿಕೆಗಳಿಗೆ ಮುಕ್ತಿ ಹಾಡಿ, ನವ ಭಾರತ ಕಟ್ತೀವಿ: ರಾಜನಾಥ್ ಸಿಂಗ್

Public TV
1 Min Read

ನವದೆಹಲಿ: 2022ರೊಳಗೆ ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆಗಳಿಗೆ ಸಂಪೂರ್ಣವಾಗಿ ಮುಕ್ತಿ ಹಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಭಯೋತ್ಪಾದನೆ, ನಕ್ಸಲ್ ದಾಳಿ, ಗಡಿ ವಿವಾದ, ಕಾಶ್ಮೀರ ಗಲಭೆ, ಈಶಾನ್ಯ ಭಾರತದಲ್ಲಿರುವ ಬಂಡಾಯ ಶಮನ ಮಾಡುವುದು ನಮ್ಮ ಗುರಿ. ಆ ಮೂಲಕ ಹೊಸ ಭಾರತ ಕಟ್ಟುವುದು ನಮ್ಮ ಧ್ಯೇಯ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

‘ನವ ಭಾರತ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ 2022ರ ವೇಳೆಗೆ ಹೊಸ ಭಾರತವನ್ನು ನಿರ್ಮಿಸುವುದು ನಮ್ಮ ಗುರಿ ಎಂದರು.

ಬಾಂಗ್ಲಾ ಗಡಿಯಲ್ಲಿ ಬಾಕಿ ಇರುವ 223.7 ಕಿ.ಮೀ ಉದ್ದಕ್ಕೆ ತಂತಿ ಬೇಲಿ ಹಾಕಲಾಗುತ್ತಿದ್ದು, ಮುಂದಿನ ವರ್ಷದಲ್ಲಿ ಮುಕ್ತಾಯವಾಗಲಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *