ಪ್ರವಾಸಿಗರ ಜೀಪ್ ಮೇಲೆ ಒಂಟಿಸಲಗ ದಾಳಿ!

Public TV
1 Min Read

ಬೆಂಗಳೂರು: ದಾರಿಯಲ್ಲಿ ಹೋಗುತ್ತಿದ್ದ ಪ್ರವಾಸಿಗರ ಜೀಪ್ ಮೇಲೆ ಏಕಾಏಕಿ ಒಂಟಿಸಲಗ ದಾಳಿ ನಡೆಸಿದ ಘಟನೆ ತಮಿಳುನಾಡಿದ ಪ್ರಸಿದ್ಧ ಪ್ರವಾಸಿ ತಾಣ ಊಟಿ ಬಳಿಯ ಕುನ್ನೂರುನಲ್ಲಿ ನಡೆದಿದೆ.

ಕುನ್ನೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಪ್ರವಾಸಿ ವಾಹನಕ್ಕೆ ಏಕಾಏಕಿ ಒಂಟಿಸಲಗ ಅಡ್ಡ ಬಂದಿದೆ. ಆನೆ ಬರುತ್ತಿರುವುದನ್ನು ಕಂಡ ಪ್ರಯಾಣೀಕರು ಕೂಡಲೇ ಜೀಪ್‍ನಿಂದ ಇಳಿದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.

ರೊಚ್ಚಿಗೆದ್ದ ಒಂಟಿಸಲಗವು ಜೀಪ್ ಮೇಲೆಯೇ ದಾಳಿ ನಡೆಸಿದೆ. ಈ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಆತಂಕ ಎದುರಾಗಿದೆ. ಕೂಡಲೇ ಸ್ಥಳೀಯರು ಜೆಸಿಬಿ ಸಹಾಯದಿಂದ ಒಂಟಿ ಸಲಗವನ್ನು ಹೆದರಿಸಿ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಒಂಟಿಸಲಗದ ದಾಳಿಯನ್ನು ಸೆರೆಹಿಡಿದ ಸಹ ಪ್ರಯಾಣಿಕರು ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಒಂಟಿ ಸಲಗದ ವಿಡಿಯೋ ಸದ್ಯ ವೈರಲ್ ಆಗಿದ್ದು, ಪ್ರಯಾಣಿಕರು ಇಂತಹ ಮಾರ್ಗ ಮಧ್ಯೆ ಎಚ್ಚರಿಕೆ ವಹಿಸುವುದು ಕೂಡ ಅಗತ್ಯವಾಗಿದೆ.

https://www.youtube.com/watch?v=J_MikaoW8xw

Share This Article
Leave a Comment

Leave a Reply

Your email address will not be published. Required fields are marked *