ಕಾರವಾರ| ಜೆಸಿಬಿ ಆಪರೇಟರ್ ಮೇಲೆ ಕಾಡುಹಂದಿ ದಾಳಿ

By
0 Min Read

ಕಾರವಾರ: ಜೆಸಿಬಿ ಆಪರೇಟರ್ ಮೇಲೆ ಕಾಡುಹಂದಿಯೊಂದು ದಾಳಿ ನಡೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರಿನ ಕಡುವಳ್ಳಿಯಲ್ಲಿ ನಡೆದಿದೆ.

ಜೆಜೆಎಂ ಕಾಮಗಾರಿ ಮಾಡುತ್ತಿದ್ದ ಜೆಸಿಬಿ ಆಫರೇಟರ್ ಮೇಲೆ ಹಂದಿ ದಾಳಿ ಮಾಡಿದೆ. ದಾಳಿಯಿಂದಾಗಿ ಒರಿಸ್ಸಾ ಮೂಲದ ಮನು ಎಂಬಾತ ಗಂಭೀರ ಗಾಯಗೊಂಡಿದ್ದಾನೆ.

ಮುಖ ಹಾಗೂ ಎದೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಮನುಗೆ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್‌ಗೆ ರವಾನಿಸಲಾಯಿತು.

Share This Article