ಅಕ್ರಮ ಸಂಬಂಧಕ್ಕಾಗಿ ಗಂಡನಿಗೇ ಸ್ಕೆಚ್ ಹಾಕಿದ್ಳು ಹೆಂಡ್ತಿ..?

Public TV
1 Min Read

ಬೆಂಗಳೂರು: ತನ್ನ ಅಕ್ರಮ ಸಂಬಂಧಕ್ಕಾಗಿ ಪ್ರಿಯಕರನ ಜೊತೆ ಸೇರಿ ಪತ್ನಿಯೊಬ್ಬಳು ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದಾಳೆ ಎಂದು ಕಾಡುಗೋಡಿ ಪೊಲೀಸ್ ಸ್ಟೇಷನ್‍ನಲ್ಲಿ ಪ್ರಕರಣ ದಾಖಲಾಗಿದೆ.

ಸುಧಾ ಎಂಬ ಮಹಿಳೆಯೇ ತನ್ನ ಪತಿ ಸೋಮಶೇಖರ್ ಕೊಲೆಗೆ ಸುಫಾರಿ ನೀಡಿದ್ದಳು ಎಂದು ದೂರು ದಾಖಲಾಗಿದೆ. ಸುಧಾ ತನ್ನ ಪ್ರಿಯಕರ ಅರುಣ್ ಎಂಬವನಿಗೆ ಸುಫಾರಿ ನೀಡಿದ್ದಳು. ಶುಕ್ರವಾರ ರಾತ್ರಿ ಗೆಳಯನ ಮನೆಗೆ ಹೋಗುವ ವೇಳೆ ಸೋಮಶೇಖರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಯಾರಿದು ಅರುಣ್: ಸುಧಾ ಮತ್ತು ಅರುಣ್ ಇಬ್ಬರೂ ಕ್ಲಾಸ್ ಮೆಟ್ ಆಗಿದ್ದರು. ಈ ನಡುವೆ ಇಬ್ಬರ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಸುಧಾ ಮತ್ತು ಸೋಮಶೇಖರ ಇಬ್ಬರಿಗೂ ವಿವಾಹವಾಗಿ ಹತ್ತು ವರ್ಷಗಳಾಗಿದ್ದು, ಕಳೆದ 5 ವರ್ಷಗಳಿಂದ ಅರುಣ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಸೋಮಶೇಖರ್ ಹೇಳ್ತಾರೆ.

ಸುಧಾ ನಡವಳಿಕೆಯ ಬಗ್ಗೆ ಅನುಮಾನಗೊಂಡ ಸೋಮಶೇಖರ್ ಪತ್ನಿಯ ಮೊಬೈಲ್ ಚೆಕ್ ಮಾಡಿದಾಗ ಬರೋಬ್ಬರಿ 400 ಕಾಲ್ ರೆಕಾರ್ಡ್‍ಗಳು ಪತ್ತೆಯಾಗಿವೆ. ಈ ಎಲ್ಲಾ ಕಾಲ್ ರೆಕಾರ್ಡ್‍ಗಳನ್ನು ಕೇಳಿದ ಸೋಮಶೇಖರ್ ಗಾಬರಿಗೊಂಡಿದ್ದಾರೆ. ಈ ಕಾಲ್ ರೆಕಾರ್ಡ್‍ಗಳಲ್ಲಿ ಸುಧಾ ಮತ್ತು ಅರುಣ್ ಇಬ್ಬರೂ ಸೋಮಶೇಖರ್ ಕೊಲೆಗೆ ಸ್ಕೆಚ್ ಹಾಕಿರುವುದು ಗೊತ್ತಾಗಿದೆ.

ಆಸ್ತಿಗಾಗಿ ಮಾಡಿದ್ರೂ ಪ್ಲಾನ್: ಇನ್ನು ಸುಧಾ ಮತ್ತು ಅರುಣ್ ಸೋಮಶೇಖರ್ ಅವರ ಆಸ್ತಿಯನ್ನು ಕಬಳಿಸಲು ಪ್ಲಾನ್ ಕೂಡ ಮಾಡಿದ್ದರು ಎಂದು ಫೋನ್ ರೆಕಾರ್ಡ್‍ನಲ್ಲಿ ತಿಳಿದಿದೆ. ಶುಕ್ರವಾರ ರಾತ್ರಿ ಸೋಮಶೇಖರ್ ಅವರ ಮೇಲೆ ಅರುಣ್ ಮತ್ತು ಪ್ರಸಾದ್ ಎಂಬವರು ಹಲ್ಲೆ ಮಾಡಿದ್ದಾರೆ. ಹಿಂಬದಿಯಿಂದ ರಾಡ್‍ನಿಂದ ತಲೆಗೆ ಹೊಡೆದು, ಎದೆಗೆ ಚಾಕುವಿನಿಂದ ಇರಿದಿದ್ದಾರೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಸೋಮಶೇಖರ ಅವರನ್ನು ಕೆಆರ್ ಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆಸ್ತಿಯನ್ನು ನನ್ನ ಹೆಸರಿಗೆ ಬರೆದುಕೊಡು ಎಂದು ನನ್ನ ಹೆಂಡತಿ ಕಿರುಕುಳ ನೀಡುತ್ತಿದ್ದಾಳೆ ಎಂದು ಸೋಮಶೇಖರ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *