ವಿಚ್ಚೇದನಕ್ಕಾಗಿ ಪಬ್‍ನಲ್ಲಿ ಹಲ್ಲೆ ಮಾಡಿದ್ರು ಅಂತಾ ಕಥೆ ಹೆಣೆದ ಪತ್ನಿ!

Public TV
1 Min Read

ಮೈಸೂರು: ಒಂದು ತಿಂಗಳ ಹಿಂದೆ ಪಬ್‍ನಲ್ಲಿ ಯುವತಿ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿರುವುದು ಸ್ಪಷ್ಟವಾಗಿದೆ.

ಕೆಲ ದಿನಗಳ ಹಿಂದೆ ಮೈಸೂರಿನ ಜಯಲಕ್ಷ್ಮಿಪುರಂನ ಪಬ್‍ನಲ್ಲಿ ಯುವಕರು ತಮ್ಮ ಮೇಲೆ ಹಲ್ಲೆ ಮಾಡಿದ್ದರು ಎಂದು ಅಮೃತಾ ಹಾಗೂ ಮಹಾಲಕ್ಷ್ಮಿ ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಪ್ರಕಾರ ಉಮೇಶ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಬಳಿಕ ಉಮೇಶ್ ಮತ್ತು ಅಮೃತಾ ಪತಿ ಪತ್ನಿ ಎನ್ನುವ ವಿಚಾರ ಗೊತ್ತಾಗಿದೆ. ಉಮೇಶ್ ಅಮೃತಾ ಪ್ರೀತಿಸಿ ಮದುವೆಯಾಗಿದ್ದರು. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಪತಿ ಜೊತೆ ಜಗಳವಾಡಿಕೊಂಡು ಅಮೃತಾ ತವರು ಮನೆ ಸೇರಿದ್ದರು. ಇದಾದ ಬಳಿಕ ವಿಚ್ಛೇದನ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಲು ಸಿದ್ದ ಎಂದು ಉಮೇಶ್ ಹೇಳಿದ್ದರು.

ಉಮೇಶ್ ಆರೋಪ ಏನು?
ನಾನು ಆಕೆಯನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರೂ ಅಮೃತಾ ವಿಚ್ಚೇದನ ನೀಡುವಂತೆ ಮತ್ತೆ ಮತ್ತೆ ಒತ್ತಡ ಹೇರಿದ್ದಾಳೆ. ಇದಕ್ಕೆ ಒಪ್ಪದ್ದಕ್ಕೆ ಪಬ್‍ನಲ್ಲಿ ಆಕೆ ಮತ್ತು ಆಕೆಯ ಸ್ನೇಹಿತೆ ಮೇಲೆ ಹಲ್ಲೆ ನಡೆಸಿದ್ದಾಗಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಉಮೇಶ್ ಈಗ ಆರೋಪಿಸಿದ್ದಾರೆ. ಈ ಹಿಂದೆ ನನ್ನ ಕಚೇರಿಯ ಬಳಿ ಕೆಲವರು ದಾಂಧಲೆ ನಡೆಸಿದ್ದರು. ಈ ದಾಂಧಲೆ ಹಿಂದೆ ಅಮೃತ ಕೈವಾಡವಿದೆ ಎನ್ನುವುದು ನನಗೆ ಈಗ ಗೊತ್ತಾಗಿದೆ ಎಂದು ಹೇಳಿದ್ದಾರೆ.

ಈಗ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಉಮೇಶ್ ಅವರು ದಾಂಧಲೆ ನಡೆಸಿದ್ದಕ್ಕೆ ಪತ್ನಿ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *