ಪಾನಮತ್ತನಾಗಿ ಕರೆದೊಯ್ಯಲು ಬಂದ ಪತಿಯನ್ನು ಸರಪಳಿಯಲ್ಲಿ ಕಟ್ಟಿ ಹಾಕಿದ ಪತ್ನಿ!

Public TV
1 Min Read

ಚಿತ್ರದುರ್ಗ:  ಮದ್ಯಪಾನದ ಚಟವನ್ನು ಬಿಡಿಸಲು ಗಂಡನನ್ನು ಪತ್ನಿಯೇ ಸರಪಳಿಯಲ್ಲಿ ಬಂಧಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

‘ಒಲಿದರೆ ನಾರಿ ಮುನಿದರೆ ಮಾರಿ’ ಎಂಬ ಮಾತಿದೆ. ಅಂತೆಯೇ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸೂರು ಗ್ರಾಮದ ಅಮೃತಾ, ಹಿರಿಯೂರು ತಾಲೂಕಿನ ಕಳವಿಬಾಗಿಯ ರಂಗನಾಥ್ ಜೊತೆ ವಿವಾಹವಾಗಿದ್ದಳು. ರಂಗನಾಥ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದನು. ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ನನ್ನ ಶರ್ಟ್ ತೆಗೆದು ನಿಲ್ಲಿಸಿದ್ದಾರೆ: ಯುವತಿಯ ಆರೋಪ

ಕೋವಿಡ್ ಎರಡನೇ ಅಲೆ ವೇಳೆ ಸ್ವಗ್ರಾಮ ಸೇರಿದ್ದ ರಂಗನಾಥ್, ಕುಡಿತದ ದಾಸನಾಗಿದ್ದನು. ಆಗ ದುಡಿಯಲಾರದ ಗಂಡನೊಂದಿಗೆ ಅಮೃತಾ ಹಿರಿಯೂರು ತಾಲೂಕಿನ ಹರ್ತಿಕೋಟೆಯಲ್ಲಿ ವಾಸವಾಗಿದ್ದಳು. ಇತ್ತ ಪ್ರತಿನಿತ್ಯ ಕುಡಿದು ಮನೆಗೆ ಧಾವಿಸುತಿದ್ದ ರಂಗನಾಥ್, ಪತ್ನಿ ಜೊತೆ ಜಗಳವಾಡ್ತಿದ್ದನು. ಇದರಿಂದ ಬೇಸತ್ತ ಪತ್ನಿ, ಪತಿಯಿಂದ ದೂರವಿದ್ದು, ತವರು ಮನೆಯಲ್ಲೇ ಬೀಡುಬಿಟ್ಟಿದ್ದಳು.

ALCOHOL

ಇತ್ತ ತವರು ಸೇರಿದ್ದ ಪತ್ನಿ ಅಮೃತಾಳನ್ನು ಕರೆತರಲು ಫುಲ್ ಟೈಟ್ ಆಗಿ ರಂಗನಾಥ್ ಬುಧವಾರ ಆಗಮಿಸಿ, ಮನೆ ಮುಂದೆ ಗಲಾಟೆ ಮಾಡಿದ್ದಾನೆ. ತಂದೆ ಉಮೇಶ್ ಜೊತೆ ಗಲಾಟೆ ಮಾಡುತ್ತಿದ್ದ ಪತಿಯ ವರ್ತನೆ ಕಂಡು ಅಮೃತಾ, ನೀನು ಕುಡಿಯುವುದು ಬಿಡುವ ತನಕ ಮನೆಗೆ ಬರಲ್ಲ ಅಂತಾ ಅವಾಜ್ ಹಾಕಿದ್ದಾಳೆ. ಅಲ್ಲದೆ ಅಲ್ಲೇ ಇದ್ದ ನಾಯಿ ಕಟ್ಟಿಹಾಕುವ ಸರಪಳಿಯನ್ನು ತಂದು ಪತಿಯನ್ನು ಬಂಧಿಸಿ, ಕಂಬಕ್ಕೆ ಕಟ್ಟಿದ್ದಾಳೆ.

ಗಂಡನನ್ನು ಪತ್ನಿಯೇ ಸರಪಳಿಯಿಂದ ಬಂಧಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾಣಗಳಲ್ಲಿ ಮಹಿಳೆಯ ಧೈರ್ಯಕ್ಕೆ ಮಹಿಳೆಯರು ಪ್ರಜ್ಞಾವಂತರು ಶಹಬ್ಬಾಸ್ ಎಂದಿದ್ದಾರೆ. ಈ ಘಟನೆ ಅಬ್ಬಿನಹೊಳೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *