ನಿನ್ನ ಬ್ಯಾನರ್ ಇಲ್ಯಾಕೆ..?- ವಿಜಯನಗರ ವಿಧಾನಸಭೆ ಕ್ಷೇತ್ರದ ಕೈ ಆಕಾಂಕ್ಷಿಗಳ ಗಲಾಟೆ

Public TV
1 Min Read

ವಿಜಯನಗರ: ಬ್ಯಾನರ್ (Banner) ಹಾಕೋ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತ (Congress Activist) ರ ಗಲಾಟೆ ನಡೆದಿರುವ ಘಟನೆ ಬಳ್ಳಾರಿಯ ವಿಜಯನಗರದಲ್ಲ ನಡೆದಿದೆ.

ವಿಜಯನಗರ ವಿಧಾನಸಭೆ ಕ್ಷೇತ್ರ (Vijayanagar Vidhanasabha Constituency) ದ ಕೈ ಆಕಾಂಕ್ಷಿಗಳ ನಡುವೆ ಈ ಗಲಾಟೆ ನಡೆದಿದೆ. ನಿನ್ನ ಬ್ಯಾನರ್ ಇಲ್ಯಾಕೆ ಅಂತ ಗಲಾಟೆ ಶುರುವಾಗಿದೆ. ಒಬ್ಬರು ಹಾಕಿಸಿರೋ ಬ್ಯಾನರ್ ಅನ್ನು ಮತ್ತೊಬ್ಬರು ಕಿತ್ತು ಹಾಕಿಸಿ, ಅವರ ಬ್ಯಾನರ್ ಗಳು ಹಾಕಿಸಿದ್ದಾರೆ.

ಪ್ರಜಾಧ್ವನಿಯಾತ್ರೆ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಆಕಾಂಕ್ಷಿಗಳು ಬ್ಯಾನರ್ ಹಾಕಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಜಶೇಖರ್ ಹಿಟ್ನಾಳ್, ಗವಿಯಪ್ಪ, ಸಿರಾಜ್ ಶೇಕ್, ಸೇರಿದಂತೆ ಅನೇಕ ನಾಯಕರ ಫೋಟೋ ಬ್ಯಾನರ್‍ನಲ್ಲಿತ್ತು. ಇದನ್ನೂ ಓದಿ: KSRTCಯ ಮೊದಲ ಎಲೆಕ್ಟ್ರಿಕ್ ಬಸ್‍ಗೆ ಅಧಿಕೃತ ಚಾಲನೆ- ವೋಲ್ವೋ ಬಸ್‍ಗಿಂತ ಕಡಿಮೆ ದರ ನಿಗದಿ

ಈ ಗಲಾಟೆ ತಾರಕ್ಕೇರುತ್ತಿದ್ದಂತೆಯೇ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ (Basavaraj Rayareddy) ಎಂಟ್ರಿ ಕೊಟ್ಟಿದ್ದಾರೆ. ಯಾರ ಫೋಟೋಸ್ ಬೇಡ, ಕೇವಲ ರಾಷ್ಟ್ರೀಯ, ರಾಜ್ಯ ನಾಯಕರ ಫೋಟೋಸ್ ಹಾಕಿ ಅಂತ ತಾಕೀತು ಮಾಡಿದ್ದಾರೆ. ಬಳಿಕ ಹೊಸಪೇಟೆಯ ಡಾ. ಪುನೀತ್ ರಾಜ್‍ಕುಮಾರ್ ಜಿಲ್ಲಾ ಕ್ರೀಡಾಂಗಣದಿಂದ ಖಾಸಗಿ ಹೊಟೇಲ್‍ಗೆ ಕರೆದು ಎಲ್ಲರನ್ನೂ ಕೂರಿಸಿ ರಾಯರೆಡ್ಡಿ ಸಮಾಧಾನ ಪಡಿಸಿದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *