ಭಯೋತ್ಪಾದಕರಿಗೆ ಏಕೆ ಬಾಗಿಲು ತೆರೆದರು? – ಆತ್ಮಾಹುತಿ ಬಾಂಬ್ ದಾಳಿಗೆ ನವಾಜ್ ಷರೀಫ್ ಪುತ್ರಿ ಖಂಡನೆ

Public TV
2 Min Read

ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಪೇಶಾವರದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯನ್ನು (Suicide Bomb Attack) ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಮ್ ನವಾಜ್ (Maryam Nawaz) ಖಂಡಿದ್ದಾರೆ.

ಪೇಶಾವರದ ಮಸೀದಿಯಲ್ಲಿ (Peshawar Mosque) ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹತ್ಯೆಗೀಡಾದ 101 ಜನರ ಸಾವಿಗೆ ಮಾಜಿ ಐಎಸ್‌ಐ (ISI) ಮುಖ್ಯಸ್ಥ ಹಾಗೂ ಪೇಶಾವರ ಕಾರ್ಪ್ಸ್ ಕಮಾಂಡರ್ ಫೈಜ್ ಹಮೀದ್ ಹೊಣೆಗಾರ ಎಂದು ದೂರಿದ್ದಾರೆ. ಇದನ್ನೂ ಓದಿ: ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

ಪಾಕಿಸ್ತಾನಿ ತಾಲಿಬಾನ್ ಎಂದು ಕರೆಯಲ್ಪಡುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಸಂಘಟನೆಯು ಆತ್ಮಾಹುತಿ ದಾಳಿಯ ಹೊಣೆ ಹೊತ್ತಿದೆ. ಇದು ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಹತ್ಯೆಗೀಡಾದ ಟಿಟಿಪಿ ಕಮಾಂಡರ್ ಉಮರ್ ಖಾಲಿದ್ ಖುರಾಸಾನಿಯ ಪ್ರತೀಕಾರದ ದಾಳಿಯ ಭಾಗವಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಹುಳಿ-ಸಿಹಿ ರುಚಿಯ ನೆಲ್ಲಿಕಾಯಿ ಜ್ಯಾಮ್ ಮಾಡಿ ನೋಡಿ

ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ - ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

ಇಮ್ರಾನ್ ಖಾನ್ (Imran Khan) ಯಾರನ್ನ ತನ್ನ ಕಣ್ಣು, ಕೈ ಹಾಗೂ ಕಿವಿ ಎಂದು ಕರೆಯುತ್ತಿದ್ದರೋ ಆ ಒಬ್ಬನನ್ನು ಪೇಶಾವರಲ್ಲಿ ನಿಯೋಜಿಸಲಾಗಿತ್ತು. ಅವನೇಕೆ ಭಯೋತ್ಪಾದಕರಿಗೆ ಬಾಗಿಲು ತೆರೆಯಬೇಕಿತ್ತು? ಭಯೋತ್ಪಾದಕರು ನಮ್ಮ ಸಹೋದರರು ಎಂದು ಏಕೆ ಹೇಳಿದ? ಭಯೋತ್ಪಾದಕನನ್ನ ಪಾಕಿಸ್ತಾನಕ್ಕೆ ಆಹ್ವಾನಿಸಿದ್ದೇಕೆ? ಜೈಲಿನಿಂದ ಹಾರ್ಡ್ಕೋರ್ ಭಯೋತ್ಪಾದಕರನ್ನ ಬಿಡುಗಡೆ ಮಾಡಿದ್ದೇಕೆ? ಅವನು (ಜನರಲ್ ಹಮೀದ್) ನಿಜವಾಗಿಯೂ ಪಾಕಿಸ್ತಾನದ ಕಣ್ಣು, ಕೈ ಮತ್ತು ಕಿವಿ ಆಗಿದ್ದರೆ, ಈ ಪರಿಸ್ಥಿತಿ (ಭಯೋತ್ಪಾದನೆಯ) ಸಂಭವಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

ನನ್ನ ತಂದೆ ದೇಶವನ್ನು ಭಯೋತ್ಪಾದನೆ ದಾಳಿಯಿಂದ ಮುಕ್ತಗೊಳಿದ್ದರು. ಆದರೆ ಇಮ್ರಾನ್ ಖಾನ್ ಆಡಳಿತದ ಕೆಟ್ಟ ನೀತಿಗಳಿಂದ ಮತ್ತೆ ಭಯೋತ್ಪಾದನೆ ಮರಳಿತು. ನವಾಜ್ ಷರೀಫ್ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದ್ದರೆ, ಇಮ್ರಾನ್ ಖಾನ್ ಅವರ 4 ವರ್ಷಗಳ ಅಧಿಕಾರಾವಧಿಯಲ್ಲಿ ದೇಶದಲ್ಲಿ ಹಾಲು ಮತ್ತು ಜೇನುತುಪ್ಪದ ನದಿಗಳು ಹರಿಯಬೇಕಾಗಿತ್ತು. ಆದರೆ ನವಾಜ್ ಷರೀಫ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ದೇಶವನ್ನು ಉಳಿಸಿದ್ದಾರೆ. ಈ ದೇಶವನ್ನು ಶ್ರೀಲಂಕಾದಂತೆ ಆಗುವುದನ್ನು ತಡೆದಿದ್ದಾರೆ ಎಂದು ಸ್ಮರಿಸಿದರು.

ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ - 89ಕ್ಕೇರಿದ ಸಾವಿನ ಸಂಖ್ಯೆ

ಯಾರಿದು ಹಮೀದ್?
ಐಎಸ್‌ಐ ಮುಖ್ಯಸ್ಥನ ಹುದ್ದೆಯನ್ನು ಪಾಕಿಸ್ತಾನ ಸೇನೆಯಲ್ಲಿ ಅತ್ಯಂತ ಪ್ರಮುಖವಾದದ್ದು ಎಂದು ಪರಿಗಣಿಸಲಾಗಿದೆ. ಇದು ತನ್ನ 75 ವರ್ಷಗಳ ಅಸ್ತಿತ್ವದಲ್ಲಿ ಅರ್ಧಕ್ಕಿಂತ ಹೆಚ್ಚು ವರ್ಷಗಳ ಕಾಲ ದೇಶವನ್ನು ಆಳಿದೆ. 2019ರ ಜೂನ್ ನಿಂದ 2021ರ ನವೆಂಬರ್ ವರೆಗೆ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಮುಖ್ಯಸ್ಥನಾಗಿದ್ದ ಲೆಫ್ಟಿನೆಂಟ್ ಜನರಲ್ ಹಮೀದ್, 2021ರ ಆಗಸ್ಟ್ ಮಧ್ಯದಲ್ಲಿ ತಾಲಿಬಾನ್ ಅಫ್ಘಾನ್ ರಾಜಧಾನಿಯನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ಮೊದಲ ಉನ್ನತ ಶ್ರೇಣಿಯ ವಿದೇಶಿ ಅಧಿಕಾರಿ ಎನ್ನಿಸಿಕೊಂಡಿದ್ದ. ಕೊನೆಯದಾಗಿ ಅವರನ್ನು ಪೇಶಾವರಕ್ಕೆ ಕಾರ್ಪ್ಸ್ ಕಮಾಂಡರ್ ಆಗಿ ನಿಯೋಜಿಸಲಾಗಿತ್ತು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *