ಪ್ಯಾಂಟ್ ಬದ್ಲು ಪಂಚೆ ಉಡೋದ್ಯಾಕೆ: ಸಿಎಂ ಮಾತಲ್ಲೇ ಕೇಳಿ

Public TV
1 Min Read

ಬೆಂಗಳೂರು: ಪ್ಯಾಂಟ್ ಬದಲು ಪಂಚೆ ಉಡೋದು ಯಾಕೆ ಅನ್ನೊ ಸೀಕ್ರೇಟ್ ಅನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಬಿಚ್ಚಿಟ್ಟಿದ್ದಾರೆ.

ವಿಕ್ಟೋರಿಯ ಆವಾರಣದಲ್ಲಿನ ನೆಫ್ರೊ ಯುರಾಲಜಿ ಅನೆಕ್ಸ್ ಕಟ್ಟಡ ಶಂಕು ಸ್ಥಾಪನೆ ಬಳಿಕ ಮಾತನಾಡಿದ ಸಿಎಂ, ನನಗೆ ಡ್ರೈ ಸ್ಕಿನ್ ಇತ್ತು. ಅದಕ್ಕೆ ನಾನು ಪಂಚೆ ಉಡುವಂತಾಯ್ತು ಅಂತ ತಮ್ಮ ಇತಿಹಾಸ ಹೇಳಿಕೊಂಡ್ರು.

ನಂಗೆ ಚರ್ಮದ ಸಮಸ್ಯೆ ಇತ್ತು. ಒಬ್ಬ ಡಾಕ್ಟರ್ ಬಳಿ ಹೋಗಿದ್ದೆ ಅವ್ನು ಯಾವನೋ ಯಾವುದೋ ಯಾವುದೋ ಆಯಿಂಟ್ ಮೆಂಟ್ ಕೊಟ್ಟು ಸಮಸ್ಯೆ ತಂದಿಟ್ಟಿದ್ದ. ನಂಗೆ ಇದರಿಂದ ಸಿಕ್ಕಾಪಟ್ಟೆ ಸಮಸ್ಯೆ ಆಯ್ತು. ಮತ್ತೊಬ್ಬ ಡಾಕ್ಟರ್ ಪಂಚೆ ಉಟ್ಟುಕೊಳ್ಳಿ ಅಂತ ಹೇಳಿದ್ರು. ಅದಕ್ಕೆ ಪಂಚೆ ಉಡುತ್ತಿದ್ದೇನೆ ಅಂತ ಪಂಚೆ ರಹಸ್ಯ ಬಿಚ್ವಿಟ್ರು.

ಬಳಿಕ ಇಂದಿರಾ ಕ್ಯಾಂಟೀನ್ ಬಗ್ಗೆ ಮಾತನಾಡಿದ ಸಿಎಂ, ಸರ್ಕಾರಿ ಆಸ್ಪತ್ರೆಯಲ್ಲಿ ಇಂದಿರಾ ಕ್ಯಾಂಟಿನ್ ಮಾಡುವ ನಿರ್ಧಾರ ಪ್ರಕಟಿಸಿದ್ರು. ವಿಕ್ಟೋರಿಯಾ, ಬೌರಿಂಗ್, ಕಿ ದ್ವಾಯ್, ಕೆಸಿ ಜನರಲ್, ಜೈದೇವಾದಲ್ಲಿ ಇಂದಿರಾ ಕ್ಯಾಂಟಿನ್ ಮಾಡ್ತೀವಿ. ರೋಗಿಗಳ ಜೊತೆ ಬರುವವರಿಗೂ ಊಟ ನೀಡುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡ್ತೀವಿ ಅಂದ್ರು.

ಇದರ ಜೊತೆಗೆ ಬಡವರಿಗೆ ಉಚಿತ ವಾಗಿ ಆರೋಗ್ಯ ಚಿಕತ್ಸೆ ನೀಡುವ `ಆರೋಗ್ಯ ಭಾಗ್ಯ’ ಯೋಜನೆಯನ್ನ ಜಾರಿಗೆ ತರುತ್ತಿದ್ದು, ನವೆಂಬರ್ 1 ರಿಂದ ಯೋಜನೆ ಜಾರಿಗೆ ಬರುತ್ತೆ ಅಂದ್ರು.

ನಮ್ಮ ಸರ್ಕಾರ ಬಂದ ಮೇಲೆ 12 ಹೊಸ ಮೆಡಿಕಲ್ ಕಾಲೇಜ್ ಮಾಡಿದ್ದೇವೆ. ಮತ್ತೆ ಹೊಸ 6 ಮೆಡಿಕಲ್ ಕಾಲೇಜು ಮಾಡ್ತೀವಿ. ಹೀಗೆ ಹಂತ ಹಂತವಾಗಿ 30 ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜ್ ಪ್ರಾರಂಭ ಮಾಡ್ತೀವಿ ಅಂತ ತಿಳಿಸಿದ್ರು. ಕಾರ್ಯಕ್ರಮದಲ್ಲಿ ವೈದ್ಯಕೀಯ ಸಚಿವ ಶರಣ ಪ್ರಕಾಶ ಪಾಟೀಲ್, ಮಾಜಿ ಸಚಿವ ಪರಿಷತ್ ಸದಸ್ಯ ರಾಮಚಂದ್ರಗೌಡ ಇನ್ನಿತರರು ಉಪಸ್ಥಿತರಿದ್ದರು.

https://www.youtube.com/watch?v=w3IRCe2EFgk

 

Share This Article
Leave a Comment

Leave a Reply

Your email address will not be published. Required fields are marked *