ಹಣಕ್ಕಾಗಿ ಅತ್ಯಾಚಾರ ಮಾಡಿ ಜೈಲು ಸೇರಿದ ಮಕ್ಕಳು – ಇತ್ತ ಬೀದಿಗೆ ಬಿದ್ದ ಅಪರಾಧಿಗಳ ಕುಟುಂಬಸ್ಥರು

2 Min Read

ಕೊಪ್ಪಳ: ಕುಡಿದ ಅಮಲಿನಲ್ಲಿ, ಗಾಂಜಾ ಮತ್ತಲ್ಲಿ, 100 ರೂ. ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಮಹಿಳೆಯರ ಮೇಲೆ ಗ್ಯಾಂಗ್ ರೇಪ್ ಮಾಡಿ, ಓರ್ವನ ಪ್ರಾಣ ತೆಗೆದಿದ್ರು. ಆದರೆ ಇದೀಗ ಆ ಮೂವರು ಅಪರಾಧಿಗಳ ಕುಟುಂಬಸ್ಥರು ನರಕ ಅನುಭವಿಸುತ್ತಿದ್ದಾರೆ.

ಕೊಪ್ಪಳದಲ್ಲಿ (Koppal) ನಡೆದ ವಿದೇಶಿ ಮಹಿಳೆ ಮೇಲಿನ ಗ್ಯಾಂಗ್ ರೇಪ್ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಪರಾಧಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಕೂಡಾ ಆಗಿದೆ. ಮರಣದಂಡನೆಗೆ ಒಳಗಾದ ಮೂವರು ಅಪರಾಧಿಗಳ ಕುಟುಂಬಗಳು ಮಾತ್ರ ಬೀದಿಗೆ ಬಿದ್ದಿವೆ. ಇದನ್ನೂ ಓದಿ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು ತೂರಾಟ – ಪೊಲೀಸರ ಮೇಲೂ ಬಿತ್ತು ಕಲ್ಲು

ಹೌದು, ಕಳೆದ ವರ್ಷ ಮಾ.06ರಂದು ನಡೆದ ಈ ಘೋರ ಘಟನೆಯ ಆರೋಪಿಗಳಿಗೆ, ಗಂಗಾವತಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಸಂತ್ರಸ್ಥರಿಗೆ ನ್ಯಾಯ ದೊರಕಿಸಿ ಕೊಟ್ಟಿದೆ. ಏನೂ ತಪ್ಪು ಮಾಡದ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಬಳ್ಳಾರಿ ಜೈಲಲ್ಲಿರೋ ಮಕ್ಕಳನ್ನು ನೋಡಲು ಹೋಗದ ಸ್ಥಿತಿಯಲ್ಲಿ ಅಪರಾಧಿಗಳ ಪರಿವಾರವಿದೆ. ಈ ಮೂವರಿಗೆ ಶಿಕ್ಷೆ ಘೋಷಣೆಯಾದ ಬಳಿಕ, ದಿಕ್ಕು ತೋಚದೇ ಶರಣಬಸವ ತಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ರು, ಈ ವೇಳೆ ಅಕ್ಕಪಕ್ಕದ ಜನರು ಕಾಪಾಡಿದ್ರು ಅಂತ ಶರಣಬಸವ ತಾಯಿ ಕಣ್ಣೀರು ಹಾಕ್ತಿದ್ದಾರೆ.

ಇನ್ನು ಎ1 ಆರೋಪಿ ಹಂದಿ ಮಲ್ಲನ ಕಥೆ ಇನ್ನೊಂದು ರೀತಿ, ಪ್ರಕರಣದ ಪ್ರಮುಖ ಆರೋಪಿ ಮಲ್ಲಯ್ಯ ಅಲಿಯಾಸ್ ಹಂದಿ ಮಲ್ಲ, ಈತನಿಗೆ ನಾಲ್ಕು ತಿಂಗಳ ಮಗು ಇದೆ. ಪತ್ನಿ ತಾಯಿಯ ಜೊತೆ ಗುಡಿಸಲಲ್ಲಿ ನಾಲ್ಕು ತಿಂಗಳ ಮಗುವನ್ನ ಕಟ್ಟಿಕೊಂಡು ಜೀವನ ಮಾಡ್ತಿದ್ದಾಳೆ. ಈ ಮೂವರು ಅಪರಾಧಿಗಳು ಕೃತ್ಯ ಎಸಗಿ ಜೈಲುಪಾಲಾದ ಮೇಲೆ ಮೂರು ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ.

ಅಪರಾಧಿಗಳಿಗೆ ಶಿಕ್ಷೆ ಜಾರಿಯಾಗಿದೆ. ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಹೋಗುವ ಅವಕಾಶವನ್ನು ನ್ಯಾಯಾಲಯ ಒದಗಿಸಿದೆ. ಆದ್ರೆ ಕೂಲಿ ಮಾಡದಿದ್ರೆ ಹೊಟ್ಟೆ ತುಂಬದ ಸ್ಥಿತಿಯಲ್ಲಿರೋ ಕುಟುಂಬದವರಿಗೆ ನರಕ ದರ್ಶನವಾಗ್ತಿದೆ. ಅವತ್ತು ಕುಡಿದ ಅಮಲಿನಲ್ಲೊ, ಗಾಂಜಾ ಮತ್ತಲ್ಲೋ ಆ ಮೂವರು ಮಾಡಿದ ಪಾಪದ ಕೃತ್ಯ, ಇವತ್ತು ಏನೂ ಗೊತ್ತಿಲ್ಲದ ವಯಸ್ಸಾದ ತಾಯಿ, ಅಸಹಾಯಕ ಪತ್ನಿ, ಜಗತ್ತನ್ನೆ ನೋಡದ ಪುಟ್ಟ ಮಗು, ಎಲ್ಲರೂ ಅನುಭವಿಸುವಂತಾಗಿದೆ.ಇದನ್ನೂ ಓದಿ: ಫೆ.27ಕ್ಕೆ ಕೇರಳ ಸ್ಟೋರಿ 2 ಬಿಡುಗಡೆ – ಚಿತ್ರ ಬಹಿಷ್ಕರಿಸುವಂತೆ ಪಿಣರಾಯಿ ಕರೆ

Share This Article