ಬೆಂಗ್ಳೂರಲ್ಲಿ ಗಣೇಶ ಪ್ರತಿಷ್ಠಾಪನೆ: 5 ಸಾವಿರ ರೂ. ಕಟ್ಟಿದ್ರೆ ಮಾತ್ರ ಎನ್‍ಒಸಿ

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಣೇಶನನ್ನು ಕೂರಿಸಬೇಕಾದರೆ 5 ಸಾವಿರ ರೂ. ಹಣವನ್ನು ಪಾವತಿಸಿ ನಿರಪೇಕ್ಷಣಾ ಪತ್ರವನ್ನು ಪಡೆಯಬೇಕು.

ಹೌದು. ಅಗ್ನಿಶಾಮಕ ಇಲಾಖೆ ಮತ್ತು ತುರ್ತು ಸೇವೆಗಳ ಡಿಜಿಪಿ 5 ಸಾವಿರ ರೂ. ನೀಡಿದರೆ ಮಾತ್ರ ನಿರಪೇಕ್ಷಣಾ ಪತ್ರ(ಎನ್‍ಒಸಿ) ನೀಡುವಂತೆ ಆದೇಶ ಹೊರಡಿಸಿದ್ದಾರೆ.

ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಅನುಮತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಿ ಸೋಮವಾರದಿಂದ ನಿರಾಪೇಕ್ಷಣಾ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಇದಕ್ಕಾಗಿಯೇ ಪೊಲೀಸ್, ಅಗ್ನಿಶಾಮಕ ಮತ್ತು ಬೆಸ್ಕಾಂ ಅಧಿಕಾರಿಗಳನ್ನು ಏಕಗವಾಕ್ಷಿ ಕೇಂದ್ರಗಳಿಗೆ ನಿಯೋಜಿಸಲಾಗಿದೆ.

ಗಣೇಶ ಮೂರ್ತಿ ಕೂರಿಸಲು 5 ಸಾವಿರ ಹಣ ಅಗ್ನಿ ಶಾಮಕ ಇಲಾಖೆ ಆದೇಶ ಹಿನ್ನಲೆಯಲ್ಲಿ ಸರ್ಕಾರದ ನೀತಿಗೆ ನಗರದಲ್ಲಿ ತೀವ್ರ ವಿರೋಧ ಕೇಳಿ ಬಂದಿದೆ. ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯಿಂದ ವಿರೋಧಿಸಿದ್ದು ಬುಧವಾರ ನಗರದಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಿದೆ.

ಆದೇಶದಲ್ಲಿ ಏನಿದೆ?
2018-19 ನೇ ಸಾಲಿನಲ್ಲಿ ನಡೆಯುವ ಗಣೇಶ ಹಬ್ಬದ ಕಾರ್ಯಕ್ರಮಗಳಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವತಿಯಿಂದ ನೀಡಲಾಗುವ ನಿರಪೇಕ್ಷಣಾ ಪತ್ರಗಳಿಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಲಯ ಹಾಗೂ ಉಪವಲಯ ಕಚೇರಿಗಳಲ್ಲಿ ದಿನಾಂಕ: 11-09-2018 ರಿಂದ ಸಮಯ ಬೆಳಿಗ್ಗೆ 9 ರಿಂದ ರಾತ್ರಿ 11 ಘಂಟೆಯವರೆಗೆ ಲಭ್ಯವಿದ್ದು ಕಾರ್ಯನಿರ್ವಹಿಸಿ ವಿವಿಧ ಸಂಘ ಸಂಸ್ಥೆಗಳಿಂದ ಬರುವ ಅರ್ಜಿಗಳಿಗೆ ಏಕಗವಾಕ್ಷಿ ಸೇವೆಯಡಿ ಸರ್ಕಾರ ಆದೇಶ ಸಂಖ್ಯೆ: ಒಇ 196 ಕಅಸೇ 2017, ದಿನಾಂಕ 27-10-2017 ರಂತೆ ನಿಗದಿ ಪಡಿಸಿರುವ ಶುಲ್ಕವನ್ನು ರೂ. 5,000 ಲೆಕ್ಕ ಶೀರ್ಷಿಕೆ 0070-60-109-0-02 ಗೆ ಮೇಲ್ಕಂಡವರಿಂದ ಕಟ್ಟಿಸಿಕೊಂಡು ಈ ಪತ್ರದೊಂದಿಗೆ ನೀಡಲಾಗಿರುವ ನಿರಾಪೇಕ್ಷಣಾ ಪತ್ರದ ಮಾದರಿಯಲ್ಲೇ ನೀಡಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಂಡು ಸಮಾಪನಾ ವರದಿಯನ್ನು ಕೇಂದ್ರ ಕಚೇರಿಗೆ ನೀಡಲು ಈ ಮೂಲಕ ಆದೇಶಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=NA8CdNiDJBM

Share This Article
Leave a Comment

Leave a Reply

Your email address will not be published. Required fields are marked *