ಕನ್ನಡಿಗರ ಸಂಪತ್ತನ್ನು ಲೂಟಿ ಹೊಡೆದವರನ್ನ ಕ್ಷಮಿಸಿದ್ದೀರಾ: ಬಿಎಸ್‍ವೈಗೆ ಸಿಎಂ ಪ್ರಶ್ನೆ

Public TV
1 Min Read

ಬೆಂಗಳೂರು: ಕರ್ನಾಟಕ ರಾಜ್ಯದ ಹಿತಕ್ಕಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಕ್ಷಮಿಸಿದ್ದೇನೆ ಎಂದು ಮಾಜಿ ಸಿಎಂ ಸಿಎಂ ಬಿ.ಎಸ್.ಯಡಿಯೂರಪ್ಪ ಸಂದರ್ಶನದಲ್ಲಿ ಹೇಳಿದ್ದನ್ನು ಸಿಎ ಸಿದ್ದರಾಮಯ್ಯ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂಗ್ಲಿಷ್ ಪತ್ರಿಕೆಗೆ ನೀಡಿದ್ದ ಸಂದರ್ಶದನಲ್ಲಿ ಯಡಿಯೂರಪ್ಪ, ನಾನು ಸಿಎಂ ಆಗಿದ್ದಾಗ ರೆಡ್ಡಿ ಸಂಕಷ್ಟದಲ್ಲಿದ್ದರು. ಈಗ ರಾಜ್ಯದ ಹಿತಕ್ಕಾಗಿ ಎಲ್ಲವನ್ನು ಮರೆತು ಕ್ಷಮಿಸಿದ್ದೇವೆ. ರೆಡ್ಡಿ ಒಬ್ಬರೇ ಅಲ್ಲ, ಬಹಳ ಜನರು ಸಂಕಷ್ಟದಲ್ಲಿದ್ದರು. ಎಲ್ಲರನ್ನು ಕ್ಷಮಿಸಿದ್ದೇವೆ. ಇನ್ನೂ ಸಂಸದ ಶ್ರೀ ರಾಮುಲು ಒಬ್ಬ ಎಸ್‍ಟಿ ಸಮುದಾಯದ ಪ್ರಬಲ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀರಾಮುಲುರನ್ನು ಡಿಸಿಎಂ ಮಾಡೋ ಸುದ್ದಿ ಕೇವಲ ಊಹಾಪೋಹ ಎಂದು ತಿಳಿಸಿದ್ದರು.

ಬಿಎಸ್‍ವೈ ನೀಡಿದ ಸಂದರ್ಶನವನ್ನೇ ಟಾರ್ಗೆಟ್ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ, ಯಾವ ಕಾರಣಕ್ಕೆ ರೆಡ್ಡಿಯನ್ನ ಕ್ಷಮಿಸಿದ್ದೀರಿ? ಕನ್ನಡಿಗರ ಸಂಪತ್ತನ್ನು ಲೂಟಿ ಹೊಡೆದವರನ್ನ ಕ್ಷಮಿಸಿದ್ದೀರಾ? ಪ್ರಧಾನಿ ನರೇಂದ್ರ ಮೋದಿ ಕೂಡ ಸಿಬಿಐಗೆ ನಿರ್ದೇಶನ ನೀಡಿ ರೆಡ್ಡಿಯನ್ನ ಕ್ಷಮಿಸಿದ್ದಾರಾ ಎಂದು ಪ್ರಶ್ನೆಯನ್ನು ಟ್ವಿಟ್ಟರ್ ನಲ್ಲಿ ಕೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *