ನನ್ನ ಬಗ್ಗೆ ಮಾತಾಡಿದ್ರೆ ಹಳ್ಳಿ ಜನರು ನಿನ್ನನ್ನು ಚಪ್ಪಲಿಯಲ್ಲಿ ಹೊಡಿತಾರೆ: ಶಾಸಕ ಅನ್ಸಾರಿ ವಿರುದ್ಧ ಜೆಡಿಎಸ್ ಅಭ್ಯರ್ಥಿ ಗುಡುಗು

Public TV
1 Min Read

ಕೊಪ್ಪಳ: ಮುಂದಿನ ದಿನಗಳಲ್ಲಿ ನನ್ನ ಬಗ್ಗೆ ಮಾತಾಡಿದ್ರೆ ಹಳ್ಳಿಯ ಜನರು ನಿನ್ನನ್ನು ಚಪ್ಪಲಿ ತಗೊಂಡು ಹೊಡೀತಾರೆ ಎಂದು ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ಧ ಜೆಡಿಎಸ್ ಅಭ್ಯರ್ಥಿ ಕರಿಯಣ್ಣ ಸಂಗಟಿ ಏಕವಚನದಲ್ಲಿಯೇ ಗುಡುಗಿದ್ದಾರೆ.

ಕೊಪ್ಪಳದ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಇಕ್ಬಾಲ್ ಅನ್ಸಾರಿ, ಎರಡು ದಿನದ ಹಿಂದೆ ಸುದ್ದಿಗೋಷ್ಠಿ ಕರೆದು ಗಂಗಾವತಿಯ ಜೆಡಿಎಸ್ ಅಭ್ಯರ್ಥಿಯಾದ ಕರಿಯಣ್ಣ ಸಂಗಟಿ ಒಬ್ಬ ಅಮಾಯಕ, ಜೆಡಿಎಸ್ ಪಕ್ಷಕ್ಕೆ ಬಲಿಯಾಗೋಕೆ ಬಂದಿದ್ದಾನೆ ಎಂದು ಅಪಹಾಸ್ಯ ಮಾಡಿದ್ದರು. ಇಕ್ಬಾಲ್ ಅನ್ಸಾರಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಸಂಗಟಿ ಇನ್ನೊಂದು ಸಲ ನನ್ನ ಬಗ್ಗೆ ಈ ರೀತಿ ಮಾತಾಡಿದ್ರೆ ಕ್ಷೇತ್ರದ ಜನರೇ ಬುದ್ದಿ ಕಲಿಸ್ತಾರೆ ಅಂತಾ ತಿರುಗೇಟು ನೀಡಿದ್ದಾರೆ.

ಕ್ಷೇತ್ರದಲ್ಲಿ ನನಗೆ ಜನ ಬೆಂಬಲವಿದೆ. ಮುಂದಿನ ದಿನಗಳಲ್ಲಿ ಜನರು ನನಗೆ ಆಶೀರ್ವಾದ ಮಾಡ್ತಾರೆ. ಆದ್ರೆ ನಿನ್ನ ಬಾಯಿಂದ ಬರೋ ಶಬ್ಧಗಳೇ ನಿನ್ನ ಸೋಲಿಗೆ ಕಾರಣವಾಗುತ್ತದೆ ಎಂದು ಅನ್ಸಾರಿ ಅವರಿಗೆ ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *