ಬೆಂಗಳೂರು: ನಾನು ಜೈಲಿಗೆ ಹೋಗೋವಾಗ ಪುಕ್ಸಟೆ ಹೋದ್ನಾ? ದುಡ್ಡು ಹೊಡೆದು ಹೋದ ಎಂದರು. ನನ್ನ ಜೊತೆಯಲ್ಲೇ ಇದ್ದವರು ಈ ಡೈಲಾಗ್ ಹೊಡೆದಿದ್ರು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆ ನೀಡಿದ್ದಾರೆ.
ನೂತನ ಶಾಸಕರ ತರಬೇತಿ ಕಾರ್ಯಕ್ರಮದಲ್ಲಿ ಮನದಾಳದ ಮಾತನ್ನು ಹಂಚಿಕೊಂಡ ಡಿಕೆಶಿ, ನಾನು ಜೈಲಿಗೆ ಹೋಗೋವಾಗ ದುಡ್ಡು ಹೊಡೆದು ಹೋದೆ ಎಂದರು. ನಾನು ಯಾರ ಜೊತೆ ಕೆಲಸ ಮಾಡಿದ್ದೆನೋ ಅವರೇ ಈ ಡೈಲಾಗ್ ಹೊಡೆದಿದ್ದರು. ಅದೆಲ್ಲಾ ಈಗ ಚರ್ಚೆ ಮಾಡೋಕೆ ಹೋಗಲ್ಲ. ಅವರು ಚೀಫ್ ಮಿನಿಸ್ಟರ್ ಆಗಿದ್ದವರು ಎಂದು ಡಿಕೆಶಿ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್
ನೂತನ ಶಾಸಕರ ಮುಂದೆ ಆತ್ಮೀಯರ ಮಾತಿನ ಬಗ್ಗೆ ಡಿಕೆಶಿ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಅವರು ಯಾರು ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಅದರ ಬಗ್ಗೆ ಮಾತನಾಡಿದ್ದು ಯಾಕೆ? ಎಂಬ ಬಗ್ಗೆ ಇದೀಗ ಭಾರೀ ಚರ್ಚೆ ಉಂಟಾಗಿದೆ. ಇದನ್ನೂ ಓದಿ: ಕೂದಲೆಳೆಯ ಅಂತರದಲ್ಲಿ ಹುಬ್ಬಳ್ಳಿಯಲ್ಲಿ ತಪ್ಪಿತು ದೊಡ್ಡ ದುರಂತ