ಸಿಎಂ ಕಾರ್ಯಕ್ರಮದಲ್ಲಿ ರೌಡಿಶೀಟರ್ ಗಳಿಗೆ ಏನ್ ಕೆಲ್ಸ?

Public TV
1 Min Read

ಕೊಪ್ಪಳ: ನುಡಿದಂತೆ ನಡೆದಿದ್ದೇವೆ- ಸಾಧನಾ ಸಂಭ್ರಮ ಎಂಬ ಘೋಷಣೆ ವಾಕ್ಯದೊಂದಿಗೆ ಸಿಎಂ ಸಿದ್ದರಾಮಯ್ಯ ನಡೆಸುತ್ತಿರೋದು ಸರ್ಕಾರಿ ಕಾರ್ಯಕ್ರಮ. ಆದರೆ ಸರ್ಕಾರಿ ಕಾರ್ಯಕ್ರಮದಲ್ಲಿ ರೌಡಿ ಶೀಟರ್ ಗಳಿಗೆ ಏನು ಕೆಲಸ? ಎಂಬ ಪ್ರಶ್ನೆಗೆ ಇದೀಗ ಸಿಎಂ ಉತ್ತರಿಸಬೇಕಿದೆ.

ಸಿಎಂ ತಾವು ನಡೆಸುವ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳೊಂದಿಗೆ ಸರ್ಕಾರದ ಕಾರ್ಯಕ್ರಮಗಳನ್ನು ಅಧಿಕಾರಿಗಳೊಂದಿಗೆ ಜನರಿಗೆ ಪರಿಚಯಿಸುವುದು ಸಂವಿಧಾನಾತ್ಮಕಾಗಿ ಒಪ್ಪಿತವಾದುದು. ಆದರೆ ಕಳೆದ 14 ರಂದು ಕೊಪ್ಪಳದ ಗಂಗಾವತಿಯಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದ ವೇದಿಕೆ ಮೇಲೆ ಬರೀ ರೌಡಿ ಶೀಟರ್ ಗಳೇ ತುಂಬಿದ್ದು, ಸಿಎಂ ನೈತಿಕತೆ ಪ್ರಶ್ನಿಸುವಂತಿತ್ತು.

 

ಸಿಎಂ ಸಿದ್ದರಾಮಯ್ಯ ಯಾವಾಗಲೂ ತಾವು ಸಮಾಜವಾದಿ, ಸಂವಿಧಾನಕ್ಕೆ ಗೌರವಿಸುವ ವ್ಯಕ್ತಿ ಎಂದು ಹೇಳತ್ತಾರೆ. ಆದರೆ ತಾವು ಭಾಗವಹಿಸುವ ಗಂಗಾವತಿ ವೇದಿಕೆಯಲ್ಲಿ ಸುಮಾರು ಐದಕ್ಕೂ ಹೆಚ್ಚು ರೌಡಿ ಶೀಟರ್ ಗಳಿದ್ದರು ಎಂಬುದು ಸಿಎಂಗೆ ಗೊತ್ತಿದೆಯೋ ಅಥಾವಾ ಗೊತ್ತಿದ್ದೂ ಜಾಣ ಕುರುಡು ಪ್ರದರ್ಶಿಸಿದ್ರೋ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜುಬೇರ್, ಸಲ್ಮಾನ ಮತ್ತು ಕಾಮದೊಡ್ಡಿ ದೇವಪ್ಪ ಎಂಬ ಮೂವರು ರೌಡಿ ಶೀಟರ್ ಗಳು ಸಿಎಂ ಪಕ್ಕದಲ್ಲೇ ನಿಂತು ಫೋಸ್ ಕೊಟ್ಟರು. ಇನ್ನು ಅತ್ಯಾಚಾರ ಆರೋಪದಡಿ ಪೊಲೀಸರಿಗೆ ಬೇಕಾಗಿರುವ ಶ್ಯಾಮೀದ್ ಮನಿಯಾರ್ ಕೂಡ ಸಿಎಂ ಅಕ್ಕ- ಪಕ್ಕ ನಿಂತಿದ್ದು, ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೇ ರೌಡಿ ಶೀಟರ್ ಗಳಾಗಿರುವ ಶಾಸಕ ಇಕ್ಬಾಲ್ ಅನ್ಸಾರಿ ಬಂಟರ ವಿರುದ್ಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರು ಪೊಲೀಸರು ಬಿ ರಿಪೋರ್ಟ್ ಹಾಕ್ತಿರೋದು ದುರಂತವೇ ಸರಿ.

Share This Article
Leave a Comment

Leave a Reply

Your email address will not be published. Required fields are marked *