ಒಬ್ಬಳನ್ನೇ ರೆಸಾರ್ಟ್ ಗೆ ಕರೆದರೆ ಉದ್ದೇಶ ಏನಿರತ್ತೆ? : ಕನ್ನಡದ ನಟಿ ಹೇಳಿಕೊಂಡ ಕಹಿ ಸತ್ಯ

Public TV
1 Min Read

ವಿಷ್ಣುವರ್ಧನ್ ನಟನೆಯ ಅಪ್ಪಾಜಿ (Appaji) ಸಿನಿಮಾ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಮನಿ (Amani) ಇದೇ ಮೊದಲ ಬಾರಿಗೆ ತಮ್ಮ ವೃತ್ತಿ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಸಿನಿಮಾ ರಂಗದ ಕಾಸ್ಟಿಂಗ್ ಕೌಚ್ (Casting Couch) ಕರಾಳಮುಖವನ್ನು ಸಮಾಜದ ಮುಂದೆ ಬಿಚ್ಚಿಟ್ಟಿದ್ದಾರೆ. ಅಡ್ಡದಾರಿಯಲ್ಲಿ ಸಿನಿಮಾ ರಂಗಕ್ಕೆ ಹೋಗುವುದಕ್ಕೆ ನನಗೆ ಇಷ್ಟವಿರಲಿಲ್ಲ. ಹಾಗಾಗಿ ತಡವಾಗಿ ನಾನು ಎಂಟ್ರಿ ಕೊಟ್ಟೆ ಎಂದು ಅವರು ಹೇಳಿಕೊಂಡಿದ್ದಾರೆ.

ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಾಗ ಅನೇಕ ಆಡಿಷನ್ ಗಳಿಗೆ ಅವರು ಹೋಗಿ ಬಂದಿದ್ದಾರಂತೆ. ಕೆಲವರು ಸೆಲಕ್ಟ್ ಆಗಿದ್ದೀಯಾ ಅಂತ ಹೇಳಿ ಕಳುಹಿಸಿ ಆನಂತರ ರಿಜೆಕ್ಟ್ ಆಗಿದ್ದೀಯಾ ಎಂದು ಹೇಳುತ್ತಿದ್ದರಂತೆ. ಇನ್ನೂ ಕೆಲವರು ನೀವು ಮನೆಗೆ ಹೋಗಿ ನಾವು ಫೋನ್ ಮಾಡುತ್ತೇವೆ ಎಂದು ಹೇಳಿ ಕಳುಹಿಸುತ್ತಿದ್ದರಂತೆ. ಒಬ್ಬರು ಕರೆ ಮಾಡಿ, ‘ಮೇಡಂ, ನಿರ್ದೇಶಕರು ಐಡಿಯಲ್ ಬೀಚ್ ರೆಸಾರ್ಟ್ ಗೆ ಬರೋಕೆ ಹೇಳಿದ್ದಾರೆ. ನೀವೊಬ್ಬರೇ ಬನ್ನಿ. ನಿಮ್ಮ ತಾಯಿ ಕರೆದುಕೊಂಡು ಬರಬೇಡಿ’ ಎಂದರಂತೆ. ಮೊದಲ ಮೊದಲು ಆಮನಿಗೆ ಅರ್ಥವೇ ಆಗಲಿಲ್ಲವಂತೆ.

ನಂತರದ ದಿನಗಳಲ್ಲಿ ಅಮ್ಮನನ್ನು ಕರೆದುಕೊಂಡು ಬರಬೇಡಿ ಅಂತ ಹೇಳುತ್ತಿದ್ದ ಕಾರಣವನ್ನು ಅರಿತರಂತೆ. ಹಾಗಾಗಿ ಅವರು ಯಾವತ್ತೂ ಅಮ್ಮನನ್ನು ಬಿಟ್ಟು ಹೋಗುತ್ತಿರಲಿಲ್ಲವಂತೆ. ಹಾಗಾಗಿಯೇ ಎರಡು ವರ್ಷಗಳಾದರೂ ಅವರಿಗೆ ಯಾವುದೇ ಪಾತ್ರವನ್ನೂ ಕೊಡಲಿಲ್ಲವಂತೆ. ರೆಸಾರ್ಟ್ ಗೆ ಹೋಗುವಂತಹ ಸಂಸ್ಕೃತಿ ನನ್ನದಲ್ಲ. ಹಾಗಾಗಿ ನಾನು ಒಪ್ಪಲಿಲ್ಲ. ತಡವಾಗಿಯೇ ನನಗೆ ಅವಕಾಶ ಸಿಕ್ಕಿದ್ದು ಎಂದು ಅವರು ಹೇಳಿಕೊಂಡಿದ್ದಾರೆ.

ನಟಿ ಆಮನಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಕನ್ನಡವೂ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದವರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರೂ, ಕನ್ನಡಕ್ಕಿಂತ ಇತರ ಭಾಷೆಗಳಲ್ಲೇ ಅವರು ಹೆಚ್ಚು ತೊಡಗಿಸಿಕೊಂಡಿದ್ದಾರೆ. ಸದ್ಯ ಆಮನಿ ಎನ್ನುತ್ತಿದ್ದಂತೆಯೇ ನೆನಪಾಗುವ ಹಾಡೆಂದರೆ ಅಪ್ಪಾಜಿ ಸಿನಿಮಾದ ‘ಏನೆ ಕನ್ನಡತಿ ನೀ ಯಾಕೆ ಹಿಂಗಾಡುತೀ’ ಗೀತೆ. ಅಪ್ಪಾಜಿ ಸಿನಿಮಾದಲ್ಲಿ ಅವರು ವಿಷ್ಣುವರ್ಧನ್ ಜೋಡಿಯಾಗಿ ಕಾಣಿಸಿಕೊಂಡಿದ್ದರು.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *