ಶಿರೂರು ಶ್ರೀ, ರಮ್ಯಾ ಶೆಟ್ಟಿಯ ನಡುವಿನ ಸಂಬಂಧವೇನು? ಮಠದ ಮಾಜಿ ಮ್ಯಾನೇಜರ್ ಸ್ಫೋಟಕ ಹೇಳಿಕೆ

Public TV
1 Min Read

ಹಾಸನ: ಶಿರೂರು ಮಠದ ಲಕ್ಷ್ಮೀವರ ಸ್ವಾಮೀಜಿಗಳ ನಿಧನಕ್ಕೆ ಸಂಬಂಧಿಸಿದಂತೆ ಕ್ಷಣ ಕ್ಷಣಕ್ಕೂ ಸ್ಫೋಟಕ ವಿಚಾರಗಳು ಹೊರ ಬರುತ್ತಿವೆ. ಶಿರೂರು ಶ್ರೀಗಳದ್ದು ಕೊಲೆಯಾಗಿದೆ ಅಂತಾದ್ರೆ ಅದಕ್ಕೆ ಕಾರಣ ರಮ್ಯಾ ಶೆಟ್ಟಿ ಎಂದು ಮಠದ ಮಾಜಿ ಮ್ಯಾನೇಜರ್ ಸುನಿಲ್ ಕುಮಾರ್ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

ಶ್ರೀಗಳಿಗೆ ಮತ್ತು ಮಠಕ್ಕೆ ಸೇರಿದಂತೆ ತರಕಾರಿ, ಆಹಾರ ಪದಾರ್ಥಗಳನ್ನು ರಮ್ಯಾ ತರುತ್ತಿದ್ದರು. ರಮ್ಯಾ ಮಠದ ಭಕ್ತೆಯಾಗಿದ್ದರೆ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಹೋಗಬೇಕಿತ್ತು. ರಮ್ಯಾ ಸ್ವಾಮೀಜಿ ಬಳಿ ಒಬ್ಬಂಟಿಯಾಗಿ ರಾತ್ರಿ ವೇಳೆ ಮಠದಲ್ಲಿ ಇರುತ್ತಿದ್ದರು. ಸ್ವಾಮೀಜಿಗಳ ಕೋಣೆಗೆ ಯಾರು ಹೋಗುತ್ತಿರಲಿಲ್ಲ, ಆದ್ರೆ ರಮ್ಯಾ ಹೋಗ್ತಿದ್ರು. ಮಠಕ್ಕೆ ಸೇರಿದ ನಂತರ ರಮ್ಯಾ ಮೈತುಂಬ ಬಂಗಾರ, ಕಾರು ಸೇರಿ 2 ಮನೆ ಸೇರಿ ಆಸ್ತಿ ಹೆಚ್ಚಾಯಿತು ಎಂದು ಆರೋಪಿಸಿದರು.

ರಮ್ಯಾ ಶೆಟ್ಟಿ ಮಠಕ್ಕೆ ಬರೋ ಮುನ್ನ ಎಲ್ಲವೂ ಚೆನ್ನಾಗಿತ್ತು. ಒಂಬತ್ತು ವರ್ಷ ನಾನು ಮತ್ತು ನನ್ನ ಕುಟುಂಬದಲ್ಲಿಯೇ ವಾಸವಾಗಿದ್ದೇವು. ಸ್ವಾಮೀಜಿಗಳು ಎಲ್ಲರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು. ಆದ್ರೆ ರಮ್ಯಾ ಶೆಟ್ಟಿ ಆಗಮನದ ಬಳಿಕ ಮಠದ ವಾತಾವರಣವೇ ಬದಲಾಯಿತು. ಕೆಲವೇ ದಿನಗಳಲ್ಲಿಯೇ ಇಡೀ ಮಠವನ್ನೇ ರಮ್ಯಾ ತನ್ನ ಸ್ವಾಧೀನಕ್ಕೆ ಪಡೆದುಕೊಂಡಳು. ಮಠದ ಬ್ಯಾಂಕ್ ವ್ಯವಹಾರ ಸೇರಿದಂತೆ ಎಲ್ಲ ಕೆಲಸಗಳನ್ನು ರಮ್ಯಾ ನೋಡಿಕೊಳ್ಳುತ್ತಿದ್ದಳು. ರಮ್ಯಾ ಸೂಚಿಸಿದವರನ್ನೆ ಮಠದ ಕಾರ್ಯಗಳಿಗೆ ನೇಮಿಸಿಕೊಳ್ಳಲಾಗುತ್ತಿತ್ತು ರಹಸ್ಯ ವಿಚಾರಗಳನ್ನು ಸುನಿಲ್ ವಿವರಿಸಿದರು.

ಶಿಶೂರು ಸ್ವಾಮೀಜಿ ಆರೋಗ್ಯವಾಗಿದ್ದರು, ಉತ್ತಮ ಯೋಗ ಹಾಗೂ ಈಜು ಪಟುವಾಗಿದ್ದರು. 55ನೇ ವಯಸ್ಸಿನಲ್ಲಿ ಸ್ವಾಮೀಜಿಗಳು ಸಾವನ್ನಪ್ಪಿದ್ದಾರೆ ಎಂದರೆ ಅದಕ್ಕೆ ರಮ್ಯಾ ಕಾರಣ. ಮಠದಲ್ಲಿ ಸ್ವಾಮೀಜಿಗಳಿಗಿಂತ ರಮ್ಯಾ ಮಾತು ನಡೆಯುತ್ತಿತ್ತು. ರಮ್ಯಾ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಪೆÇಲೀಸ್ ಗೆ ದೂರು ನೀಡಿ ಕಿರುಕುಳ ನೀಡಿ ಮಠದಿಂದ ಹೊರ ಹಾಕಿದಳು. ಮಠದಲ್ಲಿರುವ ಸಿಸಿ ಟಿವಿ ಪರೀಕ್ಷಿಸಿದರೆ ಸತ್ಯಾಂಶ ತಿಳಿಯಲಿದೆ. ರಮ್ಯಾ ವಿರುದ್ಧ ಉಡುಪಿ ಜನ ಹೋರಾಟ ಮಾಡಬೇಕು. ಆಕೆಯ ವಿರುದ್ಧ ಕಾನೂನು ಕ್ರಮ ಆಗಬೇಕು. ಸೂಕ್ತ ತನಿಖೆ ನಡೆಸಿ ರಮ್ಯಾ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸುನಿಲ್ ಆಗ್ರಹಿಸಿದರು.

Share This Article
Leave a Comment

Leave a Reply

Your email address will not be published. Required fields are marked *