ಕಾಣೆಯಾಗಿದ್ದ ಅವಳಿ ಮಕ್ಕಳ ದುರಂತ ಸಾವು

Public TV
1 Min Read

ಬೀದರ್: ಶನಿವಾರ ಕಾಣೆಯಾಗಿದ್ದ ಅವಳಿ ಜವಳಿ ಮಕ್ಕಳ ಮೃತ ದೇಹಗಳು ಇಂದು ಮನೆ ಪಕ್ಕದಲ್ಲೇ ಇರುವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಶಿವಾಜಿ ಗಲ್ಲಿಯಲ್ಲಿ ನಡೆದಿದೆ.

4 ವರ್ಷದ ದರ್ಶನ್ ಮತ್ತು ಆರ್ಯನ್ ಮೃತ ಅವಳಿ ಮಕ್ಕಳು. ಇಬ್ಬರು ಶನಿವಾರ ಮನೆಯ ಮುಂದೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದರು. ಮಕ್ಕಳು ಕಾಣುತ್ತಿಲ್ಲವೆಂದು ಪೋಷಕರು, ಸಂಬಂಧಿಕರು ಹುಡುಕಾಟ ಮಾಡಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ. ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ದೂರು ಕೊಟ್ಟಿದ್ದರು.

ಇಂದು ಬೆಳಗ್ಗೆ ಬಾವಿ ಪಕ್ಕದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ನೋಡಿ ಮನೆಯವರಿಗೆ ತಿಳಿಸಿದ್ದಾರೆ. ತಕ್ಷಣ ಮನೆಯವರು ಬಂದು ತಮ್ಮ ಮಕ್ಕಳೆಂದು ಗುರುತಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಬಾವಿಯಿಂದ ಮಕ್ಕಳ ಮೃತದೇವನ್ನು ಹೊರತೆಗೆದಿದ್ದಾರೆ. ಸ್ಥಳದಲ್ಲಿ ಮಕ್ಕಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಕುರಿತು ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *