”ಶ್ರೀರಾಮುಲುಗೆ ಸಚಿವ ಸ್ಥಾನ ಕೊಟ್ಟರೇ ನಮಗೆ ಸಿಕ್ಕಷ್ಟೆ ಖುಷಿ”

Public TV
1 Min Read

ಬಳ್ಳಾರಿ: ಕರುಣಾಕರ ರೆಡ್ಡಿ ಮತ್ತು ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು ಸೇರಿದಂತೆ ನಾವೆಲ್ಲಾ ಒಂದಾಗಿ ಒಗಟ್ಟಿನಿಂದ ಇದ್ದೇವೆ. ನಮಗೆ ಸಚಿವ ಸ್ಥಾನದ ಆಸೆಯಿಲ್ಲ, ಕೊಟ್ಟರೆ ಕೆಲಸ ಮಾಡುತ್ತೇವೆ. ಇಲ್ಲವಾದರೆ ಶ್ರೀರಾಮುಲುಗೆ ಸಚಿವ ಸ್ಥಾನ ಕೊಟ್ಟರೂ ನಮಗೆ ಸಿಕ್ಕಷ್ಟೆ ಖುಷಿ ಪಡುತ್ತೇವೆ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ನೆರೆ ಪೀಡಿತ ಪ್ರದೇಶಗಳಿಗೆ ಶ್ರೀರಾಮುಲು, ಕರುಣಾಕರ ರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಜಂಟಿಯಾಗಿ ಭೇಟಿ ನೀಡಿದ್ದರು. ಇದು ಮತ್ತೆ ರೆಡ್ಡಿ ಸಹೋದರರು ಒಂದಾಗಿದ್ದಾರೆ ಎನ್ನುವ ಸಂದೇಶ ಸಾರಿತ್ತು. ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಸೋಮಶೇಖರ ರೆಡ್ಡಿ, ಯಾವತ್ತು ನಾವು ಜಗಳವೇ ಆಡಿಲ್ಲ, ಹೀಗಾಗಿ ನಾವು ಮತ್ತೆ ಒಂದಾಗಿದ್ದೇವೆ ಎಂದು ಹೇಳೋದಲ್ಲ. ನಾವೆಲ್ಲಾ ಎಂದಿಗೂ ಒಂದೇ ಎಂದರು. ಇದನ್ನೂ ಓದಿ:ಶ್ರೀರಾಮುಲು ಟೀಮ್‍ಗೆ ಸಚಿವ ಸ್ಥಾನ ನೀಡ್ಬೇಡಿ – ಸಿಎಂಗೆ ಟಪಾಲ್ ಗಣೇಶ್ ಮನವಿ

ಸಚಿವ ಸಂಪುಟ ವಿಸ್ತರಣೆ ಕುರಿದಂತೆ ಮಾತನಾಡಿದ ಅವರು, ಭಗವಂತನ ಮೇಲೆ ನಂಬಿಕೆ ಇದೆ, ನನಗೆ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ. ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ಕೊಟ್ಟರೂ ತುಂಬಾ ಖುಷಿ ಎಂದು ಹೇಳಿದರು. ಬಳಿಕ ಬಿಎಸ್‍ಆರ್ ಪಕ್ಷ ಸ್ಥಾಪನೆ ಮಾಡಿದಾಗ ಕರುಣಾಕರ ರೆಡ್ಡಿ ನಮ್ಮೊಂದಿಗೆ ಬರಲಿಲ್ಲ. ಅದೊಂದು ವಿಚಾರ ಬಿಟ್ಟರೇ ನಾವು ಯಾವತ್ತೂ ಜಗಳವಾಡಿಲ್ಲ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *