ಹೆಣ್ಣು ಮಗಳು ಹಿಂದೂ ಹಾಡನ್ನು ಹಾಡಿದ್ದಕ್ಕೆ ನಾವು ಸಂತೋಷಪಡಬೇಕು: ಭಗವಾನ್

Public TV
2 Min Read

ಬೆಂಗಳೂರು: ಇಷ್ಟವಿದ್ದವರು ಸುಹಾನಾ ಹಾಡು ಕೇಳಿ ಸಂತೋಷ ಪಡಲಿ. ಇಲ್ಲವೆಂದಲ್ಲಿ ಅದನ್ನು ವಿರೋಧಿಸದೆ ಮೌನವಾಗಿರುವುದು ಒಳ್ಳೆಯದು ಅಂತಾ ಹಿರಿಯ ಸಾಹಿತಿ ಕೆ ಎಸ್ ಭಗವಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಆ ಹೆಣ್ಣು ಮಗಳು ಹಿಂದೂ ದೇವರ ನಾಮವನ್ನು ಪ್ರಸ್ತುತ ಪಡಿಸಿರೋದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದು ಬರುತ್ತಿರುವ ಟೀಕೆಗಳನ್ನು ಸಂಪೂರ್ಣವಾಗಿ ವಿರೋಧಿಸಬೇಕಾಗಿದೆ. ಯಾರು ಯಾವುದೇ ದೇವರ ಬಗ್ಗೆ ಬೇಕಾದ್ರು ಮಾತನಾಡಲಿ. ಅದು ಅವರಲ್ಲಿರೋ ನಂಬಿಕೆ ಮತ್ತು ಪ್ರೀತಿ ಅನುಗುಣವಾಗಿರುತ್ತದೆ. ಹೀಗಾಗಿ ಹೆಣ್ಣು ಮಗಳು ಹಾಡಿರೋ ಹಾಡನ್ನು ಇಷ್ಟವಿದ್ದವರು ಕೇಳಿ ಸಂತೋಷ ಪಡಲಿ. ಇಲ್ಲವೆಂದವರು ವಿರೋಧಿಸದೇ ಇರುವುದು ಒಳಿತು. ನಮಗೆ ಪ್ರಜಾಪ್ರಭುತ್ವ ಹಕ್ಕಿದೆ ಅಂತಾ ಎಲ್ಲವನ್ನೂ ವಿರೋಧಿಸುವುದು ಸರಿಯಲ್ಲ ಅಂತಾ ಪ್ರತಿಕ್ರಿಯಿಸಿದ್ದಾರೆ.

ಈ ವಿರೋಧಗಳು ಯಾವುದೇ ಒಂದು ಜನಾಂಗದ ಮಧ್ಯೆ ಬರಲು ಅವಕಾಶ ಮಾಡಿಕೊಡದೆ ಸಾಮರಸ್ಯಕ್ಕೆ ಅನುಕೂಲ ಮಾಡಿದರೆ ಒಳ್ಳೆಯದು. ಆ ಹೆಣ್ಣು ಮಗಳು ಹಿಂದೂ ಹಾಡನ್ನು ಹಾಡಿದರೆ ಅದಕ್ಕೆ ನಾವು ಸಂತೋಷಪಡಬೇಕು. ನಾವು ಬೇಕಾದಷ್ಟು ಉರ್ದು ಹಾಡುಗಳನ್ನು ರೇಡಿಯೋದಲ್ಲಿ, ಟಿವಿಗಳಲ್ಲಿ ಕೇಳ್ತೀವಿ. ಮಾತ್ರವಲ್ಲದೇ ಬೇರೆ ಬೇರೆ ಕಡೆ ಕಾರ್ಯಕ್ರಮಗಳಲ್ಲಿ ಹಾಕೋ ಉರ್ದು ಪದ್ಯಗಳನ್ನು ಕೂಡ ನಾವು ಕೇಳ್ತೇವೆ. ಹಾಗಾಂತ ಅವುಗಳನ್ನ ನಾವು ವಿರೋಧಿಸಲು ಹೋಗಲ್ಲ. ಹೀಗಾಗಿ ಇದು ವಿರೋಧಕ್ಕಾಗಿಯೇ ವಿರೋಧ ಹೊರತು ತಿಳುವಳಿಕೆಗಾಗಿ ವಿರೋಧವಲ್ಲ ಅಂತಾ ಹೇಳಿದ್ರು.

ಫೇಸ್ಬುಕ್ ಪೇಜಿನಲ್ಲಿ ಧಮ್ಕಿ ಹಾಕಿರೋ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಅವರು, ಧಮ್ಕಿ ಹಾಕೋದು, ತಪ್ಪು ತಿಳುವಳಿಕೆ ಇಲ್ಲದೇ ಮಾಡೋ ಕೆಲಸ. ಹೇಳಿ ಸುಮ್ಮನಾಗೋದೆ ಒಳ್ಳೆಯದು ಇಲ್ಲವೆಂದಲ್ಲಿ ಪ್ರತಿಭಟನೆಯ ಅವಶ್ಯಕತೆ ಬಂದ್ರೆ ಮಾಡ್ತೇವೆ. ಎಲ್ಲದಕ್ಕೂ ಪ್ರತಿಭಟನೆ ಮಾಡಿದ್ರೆ ಅದಕ್ಕೆ ಬೆಲೆ ಇಲ್ಲ. ಸಮಾಜದ ಸಾಮರಸ್ಯವನ್ನು ಕೆದಕುವಂತಹ ಸಂದರ್ಭಗಳು ಬಂದ್ರೆ ಪ್ರತಿಭಟನೆ ಮಾಡ್ತೇವೆ ಅಂತಾ ತಿಳಿಸಿದ್ರು.

ಈ ವಿಚಾರವಾಗಿ ಸ್ನೇಹಿತರಾದ ಸಂಸದ ಪ್ರತಾಪ್ ಸಿಂಹ ಅವರು ನನ್ನನ್ನು ನೆನಪಿಸಿಕೊಂಡಿದ್ದಕ್ಕೆ ಅವರಿಗೆ ಧನ್ಯವಾದಗಳು ಅಂತಾ ನಗುತ್ತಲೇ ಹೇಳಿದ್ರು.

ಸರಿಗಮಪ ರಿಯಾಲಿಟಿ ಶೋನ ಆಡಿಶನ್ನಲ್ಲಿ ಶಿವಮೊಗ್ಗದ ಸಾಗರ ಮೂಲದ ಯುವತಿ ಸುಹಾನಾ ಸೈಯದ್ ಅವರು `ಶ್ರೀಕಾರನೇ’ ಅನ್ನೋ ಹಿಂದೂ ಹಾಡಿರುವುದಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಮಂಗಳೂರು ಮುಸ್ಲಿಂ ಅನ್ನೋ ಫೇಸ್ಭುಕ್ ಪೇಜಿನಲ್ಲಿ ಯುವತಿಗೆ ಬೆದರಿಕೆಯೂ ಹಾಕಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ ಅವರು, ಮೋದಿ ಸರ್ಕಾರದ ಸಹಿಷ್ಣುತೆಯ ಬಗ್ಗೆ ಮಾತನಾಡೋ ಲದ್ದಿಜೀವಿ ಮಂದಿ ಎಲ್ಲಿದ್ದಾರೆ ಅಂತಾ ಪ್ರಶ್ನಿಸಿದ್ದರು.

ಇದನ್ನೂ ಓದಿ: ಸಹಿಷ್ಣುತೆಯ ಪಾಠ ಹೇಳೋ ಲದ್ದಿಜೀವಿಗಳು ಈಗ ಎಲ್ಲಿದ್ದಾರೆ- ಸುಹಾನ ವಿಚಾರದಲ್ಲಿ ಪ್ರತಾಪ್ ಸಿಂಹ ಪ್ರಶ್ನೆ

ಇದನ್ನೂ ಓದಿ:  ಮುಸ್ಲಿಂ ಯುವತಿ ಸುಹಾನಾಗೆ ಸಚಿವ ಖಾದರ್ ಬೆಂಬಲ

Share This Article
Leave a Comment

Leave a Reply

Your email address will not be published. Required fields are marked *