ನಾನೇ ಬಿಜೆಪಿಯವರ ನಿದ್ದೆಗೆಡಿಸ್ತೀನಿ- ರಾಮುಲು ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು

Public TV
1 Min Read

ಹಾಸನ: ನನ್ನ ನಿದ್ದೆಗೆಡಿಸಲು ಯಾರಿಂದಲೂ ಸಾಧ್ಯವಿಲ್ಲ. ಶ್ರೀರಾಮುಲು ಅಂತವರಿಂದ ಸಾಧ್ಯವೇ ಇಲ್ಲ ಎಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ನಾನು ಯಾವುದೇ ರೀತಿಯಲ್ಲಿ ಆತಂಕದಲ್ಲಿಲ್ಲ. ಯಾವುದೇ ರೀತಿಯಲ್ಲಿ ಬಿಜೆಪಿಯವರು ನಮ್ಮನ್ನು ನಿದ್ದೆಗೆಡಿಸುತ್ತೇವೆ ಅಂತದ್ದರಲ್ಲಿ ನಮಗೆನೂ ಇಲ್ಲ. ಅವರಿಗೆ ನಿದ್ದೆಗೆಡುತ್ತೆ ಅಷ್ಟೆ. ನನಗೆ ಹಾಗೂ ಕಾಂಗ್ರೆಸ್ ನ ನಾಯಕರಿಗೂ ನಿದ್ದೆಗೆಡಿಸಲು ಸಾಧ್ಯವಿಲ್ಲ. ಈ ಸಮ್ಮಿಶ್ರ ಸರ್ಕಾರದಲ್ಲಿ ನಿದ್ದೆಗಡೆವಂತದ್ದು ಬಿಜೆಪಿ ನಾಯಕರುಗಳಿಗೆ ಪ್ರಾರಂಭವಾಗುತ್ತದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುವುದು ಸೂಕ್ತ ಅಭಿಪ್ರಾಯಿಸಿದ್ರು. ಇದನ್ನೂ ಓದಿ: ಕಾಂಗ್ರೆಸ್‍ನವರನ್ನು ನಾವು ನಿದ್ದೆ ಮಾಡೋಕೆ ಬಿಡಲ್ಲ: ಶ್ರೀರಾಮಲು

ಎಲ್ಲರನ್ನೂ ವಿಶ್ವಾಸಕ್ಕೆ ತೆದುಕೊಂಡು ನಮ್ಮ ಸಮ್ಮಿಶ್ರ ಸರ್ಕಾರ ಮುಂದುವರೆಯುತ್ತದೆ ಅಂತ ತಿಳಿಸಿದ ಅವರು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆ ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಹಾಗೂ ಈ ರಾಜ್ಯದಲ್ಲಿ 5 ವರ್ಷ ಯಾವ ರೀತಿಯಲ್ಲಿ ಸುಭದ್ರ ಸರ್ಕಾರ ನಡೆಸಬೇಕೆಂಬುದರ ಬಗ್ಗೆ ಚರ್ಚಿಸಲಿದ್ದೇವೆ ಅಂದ್ರು.

ಈ ಜವಾಬ್ದಾರಿ ಯಾವುದೇ ಒಂದು ತಾತ್ಕಾಲಿಕವಾಗಿ ನಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳಿಗೆ ಕೈಗೊಂಡಿರುವ ಕಾರ್ಯಕ್ರಮ ಅಲ್ಲ. ಒಟ್ಟಾರೆ ಜನತೆಯ ಸಮಸ್ಯೆಯನ್ನು ಪರಿಹರಿಸುವುದೇ ಉದ್ದೇಶವಾಗಿದೆ. ಈ ಹಿಂದೆ ಒಂದು ಬಾರಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಜನತೆಯ ವಿಶ್ವಾಸವನ್ನು ಗಳಿಸಲು ಪ್ರಯತ್ನಪಟ್ಟು ಕೆಲಸ ಮಾಡಿದ್ದೇನೆ. ಈ ಬಾರಿ ಒಂದು ದೊಡ್ಡ ಸವಾಲು ಅನ್ನುವಂತದ್ದು ನನಗೆ ತಿಳಿದಿದೆ ಅಂತ ಅವರು ಹೇಳಿದ್ರು.

Share This Article
Leave a Comment

Leave a Reply

Your email address will not be published. Required fields are marked *