ಯಾವುದೇ ಕಾರಣಕ್ಕೂ ರಾಜ್ಯ ಒಡೆಯೋ ಕೆಲ್ಸ ಮಾಡ್ಬೇಡಿ : ಶಿವರಾಜ್ ಕುಮಾರ್

Public TV
1 Min Read

ಬೆಂಗಳೂರು: ನಾವೆಲ್ಲ ಒಂದೇ, ಒಟ್ಟಿಗೆ ಇರಬೇಕು. ಯಾವುದೇ ಕಾರಣಕ್ಕೂ ರಾಜ್ಯ ಒಡೆಯೋ ಕೆಲ್ಸ ಮಾಡಬೇಡಿ ಎಂದು ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ.

`ಕವಚ’ ಚಿತ್ರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಏನೇ ಸಮಸ್ಯೆ ಇದ್ದರೂ ಬಗೆಹರಿಸಿಕೊಂಡು ಹೋಗೋಣ. ಖಂಡ ಖಂಡ ಕರ್ನಾಟಕ ನಮಗೆ ಗೊತ್ತಿಲ್ಲ. ನಮಗೆ ಗೊತ್ತಿರುವುದು ಒಂದೇ, ಅದು ಅಖಂಡ ಕರ್ನಾಟಕ. ನಾವೆಲ್ಲ ಒಂದೇ. ಒಟ್ಟಿಗೆ ಇರಬೇಕು. ಯಾವುದೇ ಕಾರಣಕ್ಕೂ ರಾಜ್ಯ ಒಡೆಯುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.

ಪ್ರತ್ಯೇಕ ರಾಜ್ಯ ಬೇಕು ಎಂದು ಕೇಳುವವರಿಗೆ ಬುದ್ಧಿ ಮಾತು ಹೇಳುವಷ್ಟು ದೊಡ್ಡವನು ನಾನಲ್ಲ. ಎಲ್ಲರು ಮಾತನಾಡುವುದು ಕನ್ನಡ ಭಾಷೆ. ಇದರಲ್ಲಿ ಹುಬ್ಬಳ್ಳಿ ಭಾಷೆ, ಮೈಸೂರು, ಬೆಂಗಳೂರು ಭಾಷೆ ಎಂಬುವುದು ಇಲ್ಲ. ಒಂದರನ್ನು ನೋಡಿ ನಾವು ನಕಲು ಮಾಡುವುದು ಬೇಡ, ಯಾವುದೇ ವಿಚಾರ ಬಂದರು ಒಟ್ಟಿಗೆ ಕುಳಿತು ಮಾತನಾಡೋಣ. ನಮ್ಮ ಸ್ವಂತ ತನವನ್ನು ಬಿಟ್ಟುಕೊಡುವುದು ಬೇಡ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *