ಭಾರೀ ಮಳೆ ನೀರಿಗೆ ಹಳಿಯಲ್ಲೇ ಸಿಲುಕಿದ ರೈಲು-ವಿಡಿಯೋ ನೋಡಿ

Public TV
1 Min Read

ಭುವನೇಶ್ವರ: ಒಡಿಶಾದ ರಾಯ್ ಗಢ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಳಿ ಕಾಣದೆ ರೈಲೊಂದು ಮಳೆ ನೀರಿನಲ್ಲಿ ಸಿಲುಕಿಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.

ಭುವನೇಶ್ವರ್- ಜಗ್ದಾಲ್ ಪುರ್ ಹಿರಾಖಂಡ್ ಎಕ್ಸ್ ಪ್ರೆಸ್ ಮಳೆ ನೀರಿನಲ್ಲಿ ಸಿಲುಕಿಕೊಂಡಿದೆ. ರೈಲು ನೀರಿನಲ್ಲಿ ಸಿಲುಕಿ ಚಲಿಸಲು ಪರದಾಡುತ್ತಿರುವ ವಿಡಿಯೋವನ್ನು ಸುದ್ದಿ ಸಂಸ್ಥೆಯೊಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದೆ.

ವಿಡಿಯೋದಲ್ಲೇನಿದೆ?:
ಭಾರೀ ಮಳೆಯ ಪರಿಣಾಮ ರೈಲ್ವೇ ಹಳಿಯ ಮೇಲೆಯೇ ನೀರು ಹರಿದುಹೋಗುತ್ತಿದ್ದು, ಈ ಘಟನೆಯನ್ನು ನೋಡಲು ಸುತ್ತಮುತ್ತಲಿನ ಜನ ಛತ್ರಿ ಹಿಡಿದುಕೊಂಡು ನೋಡುತ್ತಿರುವುದು ಕಾಣಬಹುದು. ಈ ವೇಳೆ ಅದೇ ಸಮಯಕ್ಕೆ ರೈಲೊಂದು ಬಂದಿದ್ದು, ಹಳಿ ಕಾಣದೆ ಮುಂದೆ ಹೋಗಲು ಅಸಾಧ್ಯವಾಗಿ ಪರದಾಡಿದೆ.

ಹಳಿಯಲ್ಲಿಯೇ ನೀರು ಹರಿಯುತ್ತಿದ್ದ ಪರಿಣಾಮ ಜಗದಲ್ ಪುರದಿಂದ ಭುವನೇಶ್ವರ್ ಗೆ ಹೋಗುವ ರೈಲನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ಬದಲಿ ಮಾರ್ಗವಾಗಿ ಕೊರಪುಟ್ ನಿಂದ ಭುವನೇಶ್ವರ್ ಗೆ ಹೋಗುವಂತೆ ಸೂಚಿಸಲಾಗಿದೆ.

ಒಡಿಶಾದ ರಾಯ್ ಗಢ್ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕಲ್ಯಾಣಿ ನದಿ ನಡುಗಡ್ಡೆಯಾಗಿದೆ. ಪರಿಣಾಮ ಪ್ರವಾಹ ರೈಲ್ವೇ ಹಳಿಯ ಮೇಲೆ ಹರಿದುಬಂದಿದೆ. ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದುದರಿಂದ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಧಾವಿಸುವಂತೆ ಹಾಗೂ ಈ ಬಗ್ಗೆ ಎಚ್ಚರಿಕೆ ನೀಡುವಂತೆ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಲ್ಲಿನ ಸರ್ಕಾರ ಸೂಚಿಸಿದೆ. ರಾಜ್ಯದ ಮಲ್ಕಾಂಗರಿ, ಕಂಧಮಾಲ್ ಹಾಗೂ ಗಜಪತಿ ಜಿಲ್ಲೆಗಳು ಪ್ರವಾಹಕ್ಕೀಡಾಗಿವೆ.

Share This Article
Leave a Comment

Leave a Reply

Your email address will not be published. Required fields are marked *