ವಿಡಿಯೋ: ಜಲಪಾತದಲ್ಲಿ ಈಜಲು ಹೋಗಿ ನೀರಲ್ಲಿ ಕೊಚ್ಚಿ ಹೋಗಿದ್ದ 6 ಯುವಕರ ರಕ್ಷಣೆ

Public TV
1 Min Read

ರಾಯಚೂರು: ಲಿಂಗಸುಗೂರು ತಾಲೂಕಿನ ಗೋಲಪಲ್ಲಿ ಬಳಿಯ ಗುಂಡಲಬಂಡೆ ಜಲಪಾತದಲ್ಲಿ ಈಜಲು ಹೋಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದ 6 ಜನರನ್ನ ರಕ್ಷಿಸಲಾಗಿದೆ.

ನಾರಾಯಣಪುರ ಬಲದಂಡೆ ಕಾಲುವೆ ಬಸಿ ನೀರು ಹಳ್ಳಕ್ಕೆ ಹರಿದು ಸೃಷ್ಟಿಯಾಗಿರುವ ಜಲಪಾತ ಈಗ ಧುಮ್ಮಿಕ್ಕಿ ಹರಿಯುತ್ತಿದೆ. ನೀರಿನ ಸೆಳೆತ ಅರಿಯದೆ ಈಜಲು ಮುಂದಾಗಿದ್ದ 8 ಜನರಲ್ಲಿ 6 ಜನ ಕೊಚ್ಚಿ ಹೋಗಿದ್ದರು. ಸ್ಥಳೀಯರ ಸಮಯ ಪ್ರಜ್ಞೆಯಿಂದ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾಕಾರ್ಯ ಯಶಸ್ವಿಯಾಗಿ ಮಾಡಿದ್ದಾರೆ.

ಯಾದಗಿರಿಯ ಸುರಪುರ ತಾಲೂಕಿನ ದ್ಯಾಮನಾಳ ಗ್ರಾಮದ ನಿವಾಸಿಗಳಾದ ಯುವಕರು ಜಲಪಾತ ನೋಡಲು ಬಂದು ಅಪಾಯದಲ್ಲಿ ಸಿಲುಕಿದ್ದರು. ಮಳೆ ಹಾಗೂ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ವಿನ ಪ್ರಮಾಣದ ನೀರನ್ನ ಹರಿಸಿರುವುದರಿಂದ ಜಲಪಾತದಲ್ಲಿ ನೀರು ಹೆಚ್ಚಾಗಿದೆ.

ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈಗ ಜಲಪಾತ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ.

https://www.youtube.com/watch?v=02193KAHz_Q

Share This Article
Leave a Comment

Leave a Reply

Your email address will not be published. Required fields are marked *