ಹೇಳದೇ ಕೇಳದೇ ನಾಯಕ ಪಟ್ಟದಿಂದ ತೆಗೆದ್ರು – ಮೌನ ಮುರಿದ ಕೊಹ್ಲಿ

Public TV
2 Min Read

ಮುಂಬೈ: ಏಕದಿನ ತಂಡದ ನಾಯಕತ್ವದಿಂದ ತಮ್ಮನ್ನು ಏಕಾಏಕಿ ತೆಗೆದುಹಾಕಿದ್ದರ ಬಗ್ಗೆ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡಲು ಡಿಸೆಂಬರ್ 8ರಂದು ಆಯ್ಕೆ ಸಮಿತಿಯ ಸಭೆ ನಡೆಯುವುದಕ್ಕೂ ಒಂದೂವರೆ ಗಂಟೆ ಮೊದಲು ನನ್ನನ್ನು ಸಂಪರ್ಕಿಸಲಾಯಿತು. ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದ ನನಗೆ ಡಿಸೆಂಬರ್ 8ರವರೆಗೆ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ನನಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಎನ್‌ಸಿಎಯಲ್ಲಿ ಪಾಠ ಆರಂಭಿಸಿದ ಲಕ್ಷ್ಮಣ್

ಡಿಸೆಂಬರ್ 8ರಂದು ಆಯ್ಕೆ ಸಮಿತಿ ಸಭೆಗೂ ಮೊದಲು ನನಗೆ ಫೋನ್ ಕರೆ ಬಂತು. ಮುಖ್ಯ ಆಯ್ಕೆದಾರರು ನನ್ನೊಂದಿಗೆ ಟೆಸ್ಟ್ ತಂಡದ ಬಗ್ಗೆ ಚರ್ಚೆ ನಡೆಸಿದರು, ನಾವಿಬ್ಬರೂ ಅದಕ್ಕೆ ಒಪ್ಪಿಕೊಂಡೆವು. ಆ ಫೋನ್ ಕರೆ ಕೊನೆ ಆಗುವುದಕ್ಕೂ ಮೊದಲು ನಾನು ಇನ್ಮುಂದೆ ಏಕದಿನ ತಂಡದ ನಾಯಕನಾಗಿ ಮುಂದುವರಿಯಲ್ಲ ಎಂದು ಐವರು ಆಯ್ಕೆದಾರರು ನಿರ್ಧರಿಸಿದ್ದಾರೆ ಎಂದು ನನಗೆ ಹೇಳಲಾಯಿತು. ಅದಕ್ಕೆ ನಾನು ಆಯ್ತು, ಒಳ್ಳೆದು ಎಂದು ಉತ್ತರಿಸಿದೆ. ತಂಡದ ಆಯ್ಕೆ ಬಳಿಕ ಈ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ ಇದು ನಿಜವಾಗಿ ನಡೆದದ್ದು ನನ್ನನ್ನು ನಾಯಕತ್ವದಿಂದ ತೆಗೆಯುವ ಬಗ್ಗೆ ನನಗೆ ಮುಂಚಿತವಾಗಿ ಯಾವುದೇ ಮಾಹಿತಿ ಇರಲಿಲ್ಲ ಎಂದು ಕೊಹ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನಾಯಕತ್ವ ಪಟ್ಟದಿಂದ ಇಳಿಸಿದ್ದಕ್ಕೆ ಸಿಟ್ಟು? – ಅಭ್ಯಾಸ ಶಿಬಿರಕ್ಕೆ ಕೊಹ್ಲಿ ಗೈರು

ನಾನು ಏಕದಿನ ಸರಣಿಗೆ ಇದ್ದೇನೆ:
ನಾನು ದಕ್ಷಿಣ ಆಫ್ರಿಕಾ ಸರಣಿಯ ಏಕದಿನ ಪಂದ್ಯಗಳಿಂದ ರಜೆ ಕೇಳಿದ್ದೇನೆ ಎಂಬುದು ಸುಳ್ಳು. ನಾನು ಬಿಸಿಸಿಐ ಜೊತೆ ನನಗೆ ರಜೆ ಕೊಡಿ ಎಂದು ಚರ್ಚಿಸಿಲ್ಲ. ನಾನು ಸರಣಿಗೆ ಇದ್ದೇನೆ ಎಂದರು.

ರೋಹಿತ್ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ:
ನನಗೂ ರೋಹಿತ್ ಶರ್ಮಾರಿಗೂ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಕಳೆದ ಎರಡು ವರ್ಷಗಳಿಂದ ನಾವಿಬ್ಬರು ಉತ್ತಮ ಬಾಂಧವ್ಯ ಹೊಂದಿದ್ದೇವೆ. ತಂಡಕ್ಕಾಗಿ ನಾವು ಜೊತೆಯಾಗಿ ಆಡುತ್ತೇವೆ. ಈ ಬಗ್ಗೆ ನಾನು ಯಾವುದೇ ಸ್ಪಷ್ಟನೆ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *